ಬುಧವಾರ, ಆಗಸ್ಟ್ 4, 2010

ಗಿಡ ಮರಗಳನ್ನು ಬೆಳೆಯಬೇಕು

ಗದಗ ಜಲ್ಲೆಯ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿರುವ ನಮ್ಮ ಜಮೀನು
'ಕಾಡು ಬೆಳೆಸಿ ನಾಡು ಉಳಿಸಿ' ಎಂಬ ಘೋಷಣೆಯೊಂದಿಗೆ ವಿಶ್ವದಾದ್ಯಂತ ಪರಿಸರ ದಿನಾಚರಣೆಯನ್ನು ಜೂನ ೫ ರಂದು ಆಚರಿಸಲಾಯಿತು.ಪರಿಸರ ದಿನಾಚರಣೆ ಕೇವಲ ಆಚರಣೆ ಆಗದೇ ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆ ಎಂದು ನಾವು ತಿಳಿದು ಹಾಗೂ ಜನರಿಗೂ ಜಾಗೃತಿ ಮುಡಿಸುವ ಪ್ರಯತ್ನ ಮತ್ತಸ್ಟಾಗಬೇಕಿದೆ. ಪರಿಸರ ನಾಶವಾದರೆ ನಾವು ನಾಶವಾದಂತೆ ಇತ್ತಿಚಿನ ದಿನಗಳಲ್ಲಿ ಅರಣ್ಯಗಳ ನಾಶ ಮಾಡಿ ಹೊಟ್ಟೆ ಪಾಡಿಗಾಗಿ ಗುಡ್ಡು ಗಾಡು ಪ್ರದೇಶದ ಜನರು ಜೀವನ ನೆಡೆಸುತ್ತಿದ್ದಾರೆ.ಹೆಚ್ಚು ಗಿಡ ಮರಗಳನ್ನು ನಾಶಮಾಡಿದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತದೆ ಇದರಿಂದ ಮನುಷ್ಯರು ಹಾಗೂ ಪ್ರಾಣಿಗಳು ಉಸಿರಾಡಿಸಲೂ ತೊಂದರೆವುಂಟಾಗುತ್ತದೆ.ಇದನ್ನು ಅರಿತು ಅರಣ್ಯ ನಾಶ ಮಾಡದೆ ಮತ್ತಷ್ಟು ಗಿಡ ಮರಗಳನ್ನು ಬೆಳೆಯಬೇಕು.ಈಗಾಗಲೇ ವಾಹನಗಳ ಮತ್ತು ಕಾರ್ಖಾನೆಗಳು ಬಿಡುವ ಹೊಗೆಯಿಂದ ಅನೇಕ ತೊಂದರೆಗಳನ್ನು ಎದುರಿಸುವ ಪರಸ್ಥಿತಿ ಬಂದಿದೆ.ಸರಿಯಾಗಿ ಮಳೆಯಾಗದಿರಲು ಒಂದು ರೀತಿಯಲ್ಲಿ ಪರಿಸರ ನಾಶವೇ ಮುಖ್ಯ ಕಾರಣವಾಗಿದೆ.ಪಟ್ಟಣಗಳು ಬೆಳೆದಂತೆ ಪರಿಸರ ನಾಶವು ಹೆಚ್ಚಾಗುತ್ತದೆ.ಇತ್ತಿಚೀಗೆ ಬೆಂಗಳೂರದಿಂದ ಪುಣೆಗೆ ಹೊಗುವ ಎನ್ ಎಚ್ ೪ ರಸ್ತೆ ಬದಿಯಲ್ಲಿ ಸುಮಾರು ವರ್ಷಗಳಿಂದ ಬೆಳೆದಿರುವಂತಹ ಗಿಡಗಳನ್ನು ನೆಲಕ್ಕುರುಳಿಸಿದಾಗ ಆದಂತಹ ನಷ್ಟ ಅಪಾರ ಗಿಡಗಳನ್ನು ಕಡಿಯುವದು ಅನಿವಾರ್ಯವಾಗಿದ್ದರಿಂದ ಕಡಿದದ್ದಾಯಿತು ನಂತರ ರಸ್ತೆಯ ಕೆಲಸವು ನಡೆದಿದೆ ಆದರೆ ನಮ್ಮ ವಿನಂತಿ ಎಂದರೆ ನಾಶವಾದಂತಹ ಗಿಡಗಳ ಜಾಗದಲ್ಲಿ ಮತ್ತೆ ಹೆಚ್ಚಿನ ಪ್ರಮಾನದಲ್ಲಿ ಗಿಡ ನೆಟ್ಟು ಮತ್ತೆ ಹಸಿರನ್ನು ಉಳಿಸುವ ಕಾರ್ಯ ನಮ್ಮ ಸರ್ಕಾರ ಮಾಡಬೇಕು.
 ಗಿಡ ನೆಡುವ ಮೂಲಕ ಹುಟ್ಟು ಹಬ್ಬ
ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಯವರು ವನಮೊತ್ಸವ ಕಾರ್ಯಕ್ರಮದಲ್ಲಿ ಭಾಷಣಮಾಡುವಾಗ ಮೇಣ ಬತ್ತಿ ಆರಿಸು ಮೂಲಕ ಹುಟ್ಟು ಹಬ್ಬ ಆಚರಿಸುವ ಬದಲು ಒಂದು ಗಿಡ ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿ ಅಂತಾ ಹೇಳಿದ್ದು ಗಿಡ ಮರಗಳ ಬಗ್ಗೆ ಆಸಕ್ತಿ ಇರುವ ನನ್ನ ಮನಸ್ಸಿಗೆ ನಾಟಿತ್ತು , ಜೂನ 27 ರಂದು ನಮ್ಮ ನಾಲ್ಕನೆ ಮಗ ಮಾಜಅಹ್ಮದ ಇವನ 9ನೇ ವರ್ಷದ ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಿ ಬೇವು ಮತ್ತು  ಹೊಂಗೆ ಗಿಡಗಳನ್ನು ನೆಡಲಾಯಿತು. ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಯವರು ಹೇಳಿ ದಂತೆ ನಾವೆಲ್ಲರೂ ಹುಟ್ಟು ಹಬ್ಬ ಮತ್ತು ಮಳಗಾಲದಲ್ಲಿ ಬರುವ ಹಬ್ಬಗಳನ್ನು ಗಿಡ ಮರಗಳನ್ನು ನೆಡುವ ಮೂಲಕ ಆಚರಿಸುವ ರೂಡಿ ಬೇಳೆಸಿಕೊಂಡಲ್ಲಿ ನಮ್ಮ ಪರಿಸರ ಸಮೃದ್ಧಿಯಾಗುವಲ್ಲಿ ಎರಡು ಮಾತಿಲ್ಲ.

ಕಾಮೆಂಟ್‌ಗಳಿಲ್ಲ: