ಗುರುವಾರ, ಆಗಸ್ಟ್ 12, 2010

ಬೀಜ ಕಾಯಿದೆ

ge-rice-threatens-biodiversity.jpg
ದೇಶದಲ್ಲಿ ಮೂದಲ ಬಾರಿಗೆ 1966ರಲ್ಲಿ ಬೀಜ ಕಾಯಿದೆ ಜಾರಿಗೆ ಬಂತು. ಅದೇ ಕೊನೆಯ ಕಾಯಿದೆಯೂ ಆಗಿತ್ತು . 2004ರಲ್ಲಿ ಹೊಸ ಬೀಜ ಕಾಯಿದೆ ಬಂತಾದರೂ ಅದರಲ್ಲಿ ರೈತರಿಗೆ ಮಾರಕವಾದ ಅಂಶಗಳೇ ಅಧಿಧಕವಾಗಿದ್ದು, ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು . ಆ ಕಾರಣದಿಂದ ಕಾಯಿದೆಯನ್ನು ಪುನರ್ರೂಪಿಸಲು ನಿರ್ಣಯಿಸಲಾಯಿತು. ಅದೇ "ಬೀಜ ಕಾಯಿದೆ&2010'.






2004ರಲ್ಲಿ ರೈತ ವಿರೋಧಿಧ ಬೀಜ ಕಾಯಿದೆ ಬಂದಿದ್ದರಿಂದಲೇ ಬಿಟಿ ಬದನೆ ಆಗಮನವಾಯಿತು . ಬಿಟಿ ಹತ್ತಿ ಪರಿಚಯ ವಾಯಿತು. ಮೂದಲಿಗೆ ಹೆಚ್ಚಿನ ಲಾಭವನ್ನೇ ನೀಡಿದ ಬಿಟಿ ಬದನೆ ಮತ್ತು ಬಿಟಿ ಹತ್ತಿ ಆಮೇಲೆ ರೈತರ ಮೇಲೆರಗಿತು. ಆಂಧ್ರ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆದ ರೈತರು ಸಾಲುಸಾಲು ಆತ್ಮಹತ್ಯೆ ಮಾಡಿಕೊಂಡರು. ಈ ಕಾರಣದಿಂದಲೇ "2004ರ ಬಿಜ ಕಾಯಿದೆ ರೈತರ ವಿರೋಧಿಧ' ಎನ್ನುವ ಕುಖ್ಯಾತಿ ಪಡೆದಿದ್ದು ಮತ್ತು 2010ರ ಕಾಯಿದೆ ರೂಪಿಸುವ ಚಿಂತನೆ ಮೂಡಿದ್ದು .

ಬೀಜ ಕಾಯಿದೆ 2010
ಈ "ಬೀಜ ಕಾಯಿದೆ&2010' ರೈತರ ಪಾಲಿಗೆ ವರವೋ ಶಾಪವೋ& ಎನ್ನುವುದು. ಅದನ್ನು ಪರಿಶೀಲಿಸೋಣ.
* ಇಷ್ಟು ದಿನ ಸರ್ಕಾರವೇ ಬೀಜಗಳಿಗೆ ದರ ನಿಗದಿ ಮಾಡುತ್ತಿತ್ತು . ಹೊಸದಾಗಿ ರೂಪುಗೊಳ್ಳುತ್ತಿರುವ ಕಾಯಿದೆಯಲ್ಲಿ "ಬೀಜಗಳ ದರ ನಿಯಂತ್ರಣ'ದ ಬಗ್ಗೆ ಪ್ರಸ್ತಾಪ ಆಗಿಲ್ಲ . ಹೀಗಾಗಿ ಮುಂದೆ ಕಂಪನಿಗಳು ಮನಬಂದಷ್ಟು ದರಗಳನ್ನು ನಿಗದಿಪಡಿಸುವ ಅಪಾಯವಿದೆ.
* ಈವರೆಗೆ ಬೀಜಗಳನ್ನು ಪರಿಚಯಿ ಸುವುದು, ಮಾರಾಟ ಮಾಡುವುದು, ಬೆಲೆ ನಿಗದಿ ಸೇರಿದಂತೆ ಪ್ರತಿಯೊಂದನ್ನೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆಯೇ ಮಾಡಬೇಕಿತ್ತು. ಹೊಸ ಕಾಯಿದೆಯಲ್ಲಿ ರಾಜ್ಯ ಸರ್ಕಾರಗಳ ಹಕ್ಕಿನ ಬಗ್ಗೆ ಪ್ರಸ್ತಾಪ ಮಾಡಿಲ್ಲ. "ಕೆಲವೊಂದು ಪ್ರದೇಶಗಳಿಗೆ ಅನುಕೂಲ ಆಗುತ್ತದೆ' ಎಂದು ಕೇಂದ್ರ ಸರ್ಕಾರ ಕೆಲವು ಸಂಗತಿಗಳ ಕುರಿತಾಗಿ ಕಂಪನಿಗಳಿಗೆ ಅನುಮತಿ ನೀಡಿದರೆ, ರಿಯಾಯಿತಿ ನೀಡಿದರೆ, ಕಂಪನಿಗಳು ದೇಶಾದ್ಯಂತ ಇದನ್ನೇ ಅನುಸರಿಸುತ್ತವೆ.
* ಕಳಪೆ ಬೀಜದಿಂದ ಬೆಳೆ ನಾಶ ಅನುಭವಿಸುವ ರೈತರಿಗೆ ಪರಿಹಾರ ನೀಡುತ್ತಿರುವ ಈಗಿನ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದೆ. ಸಾಮಾನ್ಯವಾಗಿ ಬೀಜದ ಕಂಪನಿಗಳು ಬೀಜದ ಬೆಲೆಯನ್ನು ಮಾತ್ರ ಹಿಂತಿರುಗಿಸಿ ಕೈತೊಳೆದುಕೊಳ್ಳುತ್ತಿವೆ. ಆದರೆ ರೈತರು ಒಕ್ಕಣೆ, ಗೊಬ್ಬರ, ಔಷಧಿಧ ಸೇರಿದಂತೆ ಪ್ರತಿ ಎಕೆರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುತ್ತಾರೆ. ಖಳ ಕಂಪನಿಗಳು ಕಳಪೆ ಬೀಜ ನೀಡುವುದರಿಂದ ಇಷ್ಟೆಲ್ಲಾ ಖರ್ಚು ಮತ್ತು ಶ್ರಮ ಹಾಕಿಯೂ ರೈತ ಮೋಸ ಹೋಗುತ್ತಿದ್ದಾನೆ. ಯಾವ ಹಂತದಲ್ಲಿ ಬೆಳೆ ನಾಶವಾಯಿತು, ಇಡೀ ವ್ಯವಸಾಯಕ್ಕೆ ಆತ ಮಾಡಿದ ಖರ್ಚು ಎಷ್ಟು ಎನ್ನುವುದನ್ನು ಆಧರಿಸಿ ಪರಿಹಾರ ನಿಗದಿ ಮಾಡಬೇಕು. ಅಂಥ ಪರಿಹಾರದ ಪ್ರಸ್ತಾಪ ಹೊಸ ಕಾಯಿದೆಯಲ್ಲಿ ಆಗಿಲ್ಲ .
* ರೈತರಿಗೆ ಕಳಪೆ ಬೀಜ ನೀಡಿ ಹಣ ಮಾಡಿಕೊಳ್ಳುವ ಮೋಸಗಾರ ಕಂಪನಿಗಳಿಗೆ ದಂಡ ಹಾಕುವ ಕ್ರಮ ಮತ್ತಷ್ಟು ಶಿಸ್ತಿಗೆ ಒಳ ಪಡಬೇಕು. ಹೊಸ ಕಾಯಿದೆಯಲ್ಲಿ ಇದರ ಬಗ್ಗೆ ಚರ್ಚೆ ಆಗಿಲ್ಲ . ಹಾಲಿ ಪದ್ಧತಿಯಲ್ಲೂ ಮೋಸಗಾರ ಕಂಪನಿಗಳನ್ನು ದಂಡಿಧಿಸುವ ಕ್ರಮ ಇದೆ. ಆದರೆ ದಂಡದ ಪ್ರಮಾಣ ತೀರಾ ಕಡಿಮೆ. ಕಾಯಿದೆ ಮುಖಾಂತರ ಬಿಗಿ ಮಾಡದಿದ್ದರೆ ಖೂಳ ಕಂಪನಿಗಳ ಈ ಕೆಟ್ಟ ಚಾಳಿ ಮತ್ತೂ ಮುಂದುವರೆಯುತ್ತದೆ.
* ಆಯಾ ರಾಜ್ಯಗಳಿಗೆ ಬೇಕಾದ ಬೀಜಗಳನ್ನು ಉತ್ಪಾದಿಸುವ, ಮಾರಾಟ ಮಾಡುವ ಅವಕಾಶ ಮಾಡಿಕೊಡಬೇಕಾದುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ. ಆ ಕಾರಣಕ್ಕೆ ಪ್ರತಿ ರಾಜ್ಯಗಳಲ್ಲೂ ಪ್ರತ್ಯೇಕ "ಬೀಜ ನೋಂದಣಿ ಕೇಂದ್ರ' ಸ್ಥಾಪನೆಯಾಗಬೇಕು. ಆದರೆ ಹೊಸ ಕಾಯಿದೆ "ರಾಷ್ಟ್ರೀಯ ಬೀಜ ನೋಂದಣಿ ಕೇಂದ್ರ'ದಲ್ಲಿ ಮಾತ್ರ ನೋಂದಾಯಿಸಿಕೊಳ್ಳುವಂತೆ ಹೇಳುತ್ತಿದೆ. ಇದರಿಂದ ರಾಜ್ಯ ಸರ್ಕಾರಗಳ ಹಕ್ಕು ಮೂಟಕುಗೊಳ್ಳುತ್ತದೆ ಮತ್ತು "ಕೇಂದ್ರೀಕರಣ'ಗೊಳ್ಳಲು ಅನುವು ಮಾಡಿ ಕೊಟ್ಟಂತಾಗುತ್ತದೆ.
* ಬೆಳೆ ನಾಶ ಅನುಭವಿಸುವ ರೈತರಿಗೆ ಕಡ್ಡಾಯವಾಗಿ ಪರಿಹಾರ ನೀಡಲೇಬೇಕು ಎಂದು ಪ್ರತಿಪಾದಿಸುವ ರೈತಸ್ನೇಹಿಯಾದ "ಪರಿಹಾರ ಸಮಿತಿ' ಸ್ಥಾಪಿಸುವ ಚಿಂತನೆ ನೂತನ ಕಾಯಿದೆಯಲ್ಲಿದೆ. ಹಲವಾರು ಕಂಪನಿಗಳು ರೈತರಿಗೆ ಕಳಪೆ ಬೀಜ ಮಾರಿ ಪರಿಹಾರ ನೀಡದೆ ಮೋಸ ಮಾಡುತ್ತಿದ್ದವು. ಹೊಸ ಕಾಯಿದೆ ಪ್ರಕಾರ ಕಂಪನಿಗಳಿಗೆ ಮೋಸ ಮಾಡಲು ಸಾಧ್ಯ ಇರುವುದಿಲ್ಲ . ಇಷ್ಟು ದಿನ ರೈತರು ತಮಗೆ ಆದ ಅನ್ಯಾಯವನ್ನು ನ್ಯಾಯಾಲಯ ಅಥವಾ ಗ್ರಾಹಕರ ವೇದಿಕೆಗಳಲ್ಲಿ ಪರಿಹರಿಸಿಕೊಳ್ಳಬೇಕಿತ್ತು . ನ್ಯಾಯಾಲಯ ಮತ್ತು ಗ್ರಾಹಕರ ವೇದಿಕೆಗಳಲ್ಲಿ ತೀರ್ಪು ಬರುವುದು ವಿಳಂಬವಾಗಿ ರೈತರು ಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ "ಪರಿಹಾರ ಸಮಿತಿ' ತ್ವರಿತವಾಗಿ ವಿಚಾರಣೆ ನಡೆಸಿ 60 ದಿನಗಳೊಳಗೆ ಪರಿಹಾರ ಕೊಡಿಸಿಕೊಡಲಿದೆ.
ಈ ಸಮಿತಿಯು ಕೇಂದ್ರ ಸರ್ಕಾರದ ಮಟ್ಟದಲ್ಲಿರುತ್ತದೋ, ರಾಜ್ಯ ಸರ್ಕಾರದ ಮಟ್ಟದಲ್ಲಿರುತ್ತದೋ, ಸ್ಥಳೀಯ ಆಡಳಿತದ ಮಟ್ಟದಲ್ಲಿರುತ್ತದೋ ನಿಗದಿಯಾಗಿಲ್ಲ . ವಾಸ್ತವವಾಗಿ ಸ್ಥಳೀಯ ಮಟ್ಟದಲ್ಲಿದ್ದರಷ್ಟೇ ರೈತರು ಪರಿಹಾರ ಸಮಿತಿ ಮುಂದೆ ಅಹವಾಲು ಸ್ವೀಕರಿಸಲು, ಪರಿಹಾರ ಪಡೆಯಲು ಸಾಧ್ಯ.
* ಬೀಜ ಉತ್ಪಾದಿಸುವುದಕ್ಕೆ, ಸಂರಕ್ಷಿಸು ವುದಕ್ಕೆ ಮತ್ತು ಮಾರಾಟಕ್ಕೆ ರೈತರಿಗೆ ಮೂದಲಿನಂತೆ ಮುಕ್ತ ಸ್ವಾತಂತ್ರ್ಯವಿದೆ. ಆದರೆ ಬೀಜಗಳನ್ನು ಬ್ರಾಂಡ್ ಮಾಡಿ ಮಾರಾಟ ಮಾಡುವುದಕ್ಕೆ ಮಾತ್ರ ನೋಂದಣಿ ಮಾಡಿಸಬೇಕು. ಇದು ಒಳ್ಳೆಯದೂ ಹೌದು. ಇದರಿಂದ ಕಂಪನಿಗಳು ರೈತರ ಹೆಸರಿನಲ್ಲಿ ಬೀಜ ಮಾರಾಟ ಮಾಡಲಾಗುವುದಿಲ್ಲ .
ಹೀಗೆ 2010ರ ಬೀಜ ಕಾಯಿದೆ ಹಲವು ಸೂಕ್ಷ್ಮಗಳನ್ನು ಒಳಗೊಂಡಿದೆ. ಇವೆಲ್ಲದರ­ ನಿರ್ವಹಣೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಮಾರಕವಾಗಲಿದೆ.

ಕಾಮೆಂಟ್‌ಗಳಿಲ್ಲ: