ಮಂಗಳವಾರ, ಸೆಪ್ಟೆಂಬರ್ 28, 2010

ಜೈವಿಕ ಇಂಧನ ಮಂಡಳಿಗೆ 30 ಕೋಟಿ ರೂ.


Udayavani | Aug 10, 2010
ಬೆಂಗಳೂರು : ಜೈವಿಕ ಇಂಧನ ಮಂಡಳಿಗೆ ಶೀಘ್ರವೇ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಜರುಗಿದ ಜೈವಿಕ ಇಂಧನ ಕಾರ್ಯಪಡೆಯ ಸಂಸ್ಕರಣಾ ಕೇಂದ್ರಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಅಧ್ಯಕ್ಷತೆ ವಹಿಸಿ, ಮುಖ್ಯಮಂತ್ರಿ ಅವರ ಲಿಖೀತ ಭಾಷಣ ಓದಿದ ಅವರು, ಜೈವಿಕ ಸಸ್ಯಗಳ ಬೀಜಗಳ ಸಂರಕ್ಷಣೆ, ತರಬೇತಿ ಮುಂತಾದ ಉದ್ದೇಶಗಳಿಗಾಗಿ ಶೀಘ್ರವೇ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ಜೈವಿಕ ಇಂಧನ ಉದ್ಯಮಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯನ್ನು ಯಶಸ್ಸುಗೊಳಿಸುವ ಉದ್ದೇಶದಿಂದ ಮಂದಿನ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 15 ಕೋಟಿ ಜತ್ರೋಪ, ಹೊಂಗೆ ಇತ್ಯಾದಿ ಸಸಿಗಳನ್ನು ನೆಡುವ ಉದ್ದೇಶವಿದೆ. ಈ ದಿಸೆಯಲ್ಲಿ ಕಾರ್ಯಪಡೆ ಹಮ್ಮಿಕೊಂಡಿರುವ ಕೆಲಸಕ್ಕೆ ಅರಣ್ಯ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಕೈಜೋಡಿಸಬೇಕು ಎಂದು ಕರೆ ನೀಡಿದರು.

ತೈಲ ಉತ್ಪನ್ನಗಳ ಬಳಕೆಯಿಂದ ದೇಶದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದ್ದು ರಾಜ್ಯ ಸರ್ಕಾರ ಜೈವಿಕ ಕಾರ್ಯಪಡೆ ಸ್ಥಾಪಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದ ಅವರು, ತೈಲೋತ್ಪನ್ನಗಳ ಬಳಕೆಯಿಂದ ರಾಜ್ಯದ ಪರಿಸರದ ಮೇಲೆ ಆಗಿರುವ ಮತ್ತು ಆಗುತ್ತಿರುವ ಪರಿಣಾಮದ ಬಗ್ಗೆ ಕಾರ್ಯಪಡೆ, ಪರಿಸರ ಇಲಾಖೆ ಜತೆ ಸೇರಿ ಅಧ್ಯಯನ ನಡೆಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಕಾರ್ಯಪಡೆ ಅಧ್ಯಕ್ಷ ವೈ .ಬಿ. ರಾಮಕೃಷ್ಣ , ಜೈವಿಕ ಇಂಧನ ಸಂಶೋಧನೆಗೆ ಕಾರ್ಯಪಡೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. 'ಹಸಿರು ಹೊನ್ನು' ಮತ್ತು 'ಬರಡು ಬಂಗಾರ' ಕಾರ್ಯಕ್ರಮಗಳ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ವರ್ಷ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೊಂಗೆ ಇತ್ಯಾದಿ ಸಸಿ ನೆಡಲು ಉದ್ದೇಶಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜೈವಿಕ ಇಂಧನ ಕೈಪಿಡಿಯನ್ನು ಸಚಿವರು ಬಿಡುಗಡೆ ನಮಾಡಿದರು.

ಭಾನುವಾರ, ಸೆಪ್ಟೆಂಬರ್ 26, 2010

ಹೊಂಗೆ ಮರದ ರಸ್ತೆ

ಸಂಜಯ ನಗರ ಬಡಾವಣೆಗೆ ಹೊಂದಿಕೊಂಡಿರುವ ಭೂಪಸಂದ್ರದಲ್ಲಿ. ಇಲ್ಲಿನ ಕಲ್ಪನಾಚಾವ್ಲ ರಸ್ತೆ ಮತ್ತು ಹೆಬ್ಬಾಳದ ಫೈಓವವರ್‌ಗೆ ಸಂಪರ್ಕ ಕಲ್ಪಿಸುವ ೬೦ ಅಡಿ ವಿಶಾಲ ಒಳ ರಸ್ತೆಯೇ ಹೊಂಗೆ ಮರದ ರಸ್ತೆ !
ಈ ರಸ್ತೆಗೆ 'ಹೊಂಗೆ ಮರದ ರಸ್ತೆ' ಎಂದು ಯಾರೂ ಹೆಸರಿಟ್ಟಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಹಸಿರಿನಿಂದ ಕಂಗೊಳಿಸುವ ಸಾಲು ಸಾಲು ಹೊಂಗೆ ಮರಗಳು 'ಈ ರಸ್ತೆಗೊಂದು ಅಂಥ ಹೆಸರಿಡಿ' ಎಂದು ಕೇಳುತ್ತವೆ.

ಹೊಂಗೆ ಮರಗಳ ಸಾಲು.ಇಲ್ಲಿ ಸುಮಾರು ನೂರಕ್ಕೂ ಹೆಚ್ಚು ಮರಗಳಿರಬಹುದು. ಎಲ್ಲ ಮರಗಳನ್ನೂ ಪಾದಚಾರಿ ಮಾರ್ಗದಲ್ಲೇ ನೆಟ್ಟಿದ್ದಾರೆ. ಪ್ರತಿಯೊಂದಕ್ಕೂ ವ್ಯವಸ್ಥಿತವಾಗಿ ಸಿಮೆಂಟ್ ಪಾತಿ ಮಾಡಲಾಗಿದೆ. ದಟ್ಟವಾಗಿರುವ ಈ ಮರಗಳ ನಡುವಿನ ರಸ್ತೆಯಲ್ಲಿ ಮುಂಜಾನೆ, ಸಂಜೆ ವಿಹರಿಸುವುದೆಂದರೆ ವಾಹ್ ! ಅದರ ಅನುಭವವೇ ವಿಭಿನ್ನ !

ಐದಾರು ವರ್ಷಗಳ ಹಿಂದೆ ಭೂಪಸಂದ್ರ ಬಡಾವಣೆಯನ್ನು 'ಹಸಿರಾಗಿಸುವ' ಪ್ರಯತ್ನದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯವರು ಈ ಹೊಂಗೆ ಸಸಿಗಳನ್ನು ನೆಟ್ಟಿದ್ದಾರೆ. ಆಗ ಇಲಿ ಸ್ವಂತ ಮನೆ ಹೊಂದಿದ್ದವರು ತಮ್ಮ ಮನೆಯ ಮುಂದೆ ಅಲಂಕಾರಕ್ಕಾಗಿ ಎರಡೆರಡು ಹೊಂಗೆ ಮರಗಳನ್ನು ಕೇಳಿ ಕೇಳಿ ನಾಟಿ ಮಾಡಿಸಿದ್ದಾರೆ. ಈಗ ಅವೆಲ್ಲ ಪುಟ್ಟ ಪುಟ್ಟ ಮರಗಳಾಗಿ ಇಡೀ ರಸ್ತೆಗೆ ಹಸಿರುಡುಗೆಯಾಗಿಸಿವೆ.

ಫೆಬ್ರುವರಿ ಮಾರ್ಚ್ ತಿಂಗಳ್ಲಲಿ ಈ ರಸ್ತೆಯ್ಲಲಿ ಮುಂಜಾನೆ ಒಂದು ವಿಶಿಷ್ಟ ಅನುಭವ. ಅದು ಹೂವು ಅರಳುವ ಸಮಯ. ದುಂಬಿಗಳು ಹೂವಿನ ಮಕರಂದ ಹೀರುತ್ತಾ ಆನಂದವಾಗಿ ಹಾರುಡುತ್ತಿರುತ್ತವೆ. ಜೇನಿನ ಹುಳಗಳು ಮಕರಂದ ಹೀರಿ ಪಕ್ಕದ ಬೇಲಿಗೆ ಹಾರಿ 'ಗೂಡು' ಕಟ್ಟುತ್ತವೆ. ಹೊಂಗೆ ಹೂವು ಪರಿಮಳ 'ದೇಹ ದಂಡಿಸುವವರ' ಮನಸ್ಸನ್ನು ಅರಳಿಸುತ್ತದೆ. ಮುಂದಿನ ದಿನಗಳ್ಲಲಿ ಇದೇ ಹೂವುಗಳು ನೆಲದ್ಲಲಿ ಹರಡಿಕೊಂಡು ನಡೆದಾಡುವವರಿಗೆ ನಡೆಮುಡಿ ಹಾಸುತ್ತವೆ. ಈ ನೈಸರ್ಗಿಕ ಪ್ರಕ್ರಿಯೆಯನ್ನು ನೋಡುವುದೇ ಒಂದು ಆನಂದ.ಹೊಂಗೆ ಮರಗಳು ಅಂದ ಹೆಚ್ಚಿಸುವ ಜೊತೆಗೆ ಬೇಸಿಗೆಯ ಬೇಗೆಯನ್ನೂ ತಣಿಸುತ್ತವೆ.

ಬಿಸಿಲಿನ್ಲಲಿ ಓಡಾಡುವ ಹಿರಿಯ ಜೀವಗಳು ಹೊಂಗೆಯ ನೆರಳಿನಲ್ಲಿ ಸ್ವಲ್ಪ ಹೊತ್ತು ವಿರಮಿಸಿ ಕೊಂಡು ಮುಂದುವರಿಯುತ್ತಾರೆ.

ಹೊಂಗೆ ಮರಗಳು ಕೇವಲ ಈ ಪ್ರಮುಖ ರಸ್ತೆಯ್ಲಲಷ್ಟೇ ಅಲ. ಒಳ ರಸ್ತೆಗಳನ್ನೂ ಅಲಂಕರಿಸಿವೆ. ಸಮೀಕ್ಷೆ ಮಾಡಿದರೆ ಪ್ರತಿ ಮನೆಗಳ ಮುಂದು ಎರಡೆರಡು ಹೊಂಗೆ ಮರಗಳಿವೆ. ಆ ಮರಗಳು ಅದೆಷ್ಟು ಅಂದವಾಗಿ ಬೆಳೆದುಕೊಂಡಿವೆಯೆಂದರೆ ಒಂದು ಕಾರನ್ನು ಸರಾಗವಾಗಿ ಮರದ ಕೆಳಗೆ ಪಾರ್ಕ್ ಮಾಡಬಹುದು. ಹಾಗಾಗಿ ಮರಗಳ ನೆರಳು ಕಾರು ಪಾರ್ಕಿಂಗ್‌ಗೆ ಮೀಸಲಾಗಿದೆ. ಮರದ ನೆರಳು ಕಾರು ಪಾರ್ಕಿಂಗ್‌ಗೆ ಹೇಳಿ ಮಾಡಿಸಿದಂತಿವೆ. ಈ ನೆರಳನ್ನೇ ಬಳಸಿಕೊಂಡ ಕೆಲವರು ತಮ್ಮ ಮನೆಗಳ ಮುಂದೆ ಅಲಂಕಾರಿಕ ಸಸ್ಯಗಳನ್ನೂ ಬೆಳೆಸಿ, ರಸ್ತೆಯ ಚೆಲುವು ಹೆಚ್ಚಲು ಕೆಲವು ನಾಗರಿಕರು ಸಹಕರಿಸಿದ್ದಾರೆ.

ಬೆಂಗಳೂರಿನ ರಸ್ತೆ ಬದಿಗಳಲ್ಲಿ ಹೀಗೆ ಮರಗಳ ಸಾಲಿರುವುದು ಸಾಮಾನ್ಯ, ಅದರಲ್ಲಿ ಅಂಥ ವಿಶೇಷವಿಲ್ಲ. ಆದರೆ ಈ ಬಡಾವಣೆಯಲ್ಲಿ ಮರಗಳನ್ನು ಸಂರಕ್ಷಿಸುವ, ಪೋಷಿಸುವ ಮತ್ತು ನಿರ್ವಹಿಸುವ ನಾಗರಿಕರ ಆಸಕ್ತಿ, ಆಸ್ತೆ ಮೆಚ್ಚುವಂಥದ್ದು. ಎಲರೂ ಈ ಕಾರ್ಯಕ್ಕೆ ಕೈ ಜೋಡಿಸದಿದ್ದರೂ ತಮ್ಮ ಕಾರಿಗೆ ನೆರಳು ನೀಡುವ, ದಣಿದ ದೇಹಗಳಿಗೆ ತಂಪನೆರೆಯುವ, ಮನೆ ಮುಂದಿನ ಅಂದ ಹೆಚ್ಚಿಸುವ ವೃಕ್ಷ ಪ್ರೀತಿಯ ಮನಸ್ಸಿರುವ ಕೆಲವರು ಹೊಂಗೆ ಮರಗಳ ಒಂದೇ ಒಂದು ರೆಂಬೆಯನ್ನೂ ಕೀಳಗೊಡುವುದ್ಲಿಲ. ಅಷ್ಟೇ ಅಲ. ನಿತ್ಯ ಕಾರು ತೊಳೆಯುವವರು ಉಳಿದ ನೀರನ್ನು ಮನೆ ಮುಂದಿನ ಗಿಡಗಳಿಗೆ ಉಣಿಸುತ್ತಾರೆ. ಕಾಲ ಕಾಲಕ್ಕೆ ಕೊಂಬೆಗಳನ್ನು ಸವರಿಸುತ್ತಾರೆ. ರೆಂಬೆಗಳು ದೊಡ್ಡದಾಗ್ದಿದರೆ ಪಾಲಿಕೆಯವರಿಗೆ ತಿಳಿಸುತ್ತಾರೆ. ನಾಗರಿಕರ ಮತ್ತು ಪಾಲಿಕೆಯವರ ಸಹಯೋಗದಲ್ಲಿ ಪಾದಚಾರಿ ಮಾರ್ಗಗಳಲ್ಲೂ ಮರಗಳು ಸುರಕ್ಷಿತವಾಗಿವೆ. ಈ ಮರ ಬೆಳೆಸುವ ಮುತುವರ್ಜಿ ನಿಜಕ್ಕೂ ಮಾದರಿಯಾಗುವಂಥದ್ದು.

ಶುಕ್ರವಾರ, ಸೆಪ್ಟೆಂಬರ್ 24, 2010

ಅಭಿವೃದ್ಧಿ ಹೆಸರಿನಲ್ಲಿ ಮರಗಳ ನಾಶ

'ಪ್ರಕೃತಿಯನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ' ಎಂಬ ಮಾತಿದೆ. ಅದು ನೂರಕ್ಕೆ ನೂರು ಸತ್ಯ. ಪ್ರತಿನಿತ್ಯ ನಾವು 'ಅಭಿವೃದ್ಧಿ' ಹೆಸರಿನಲ್ಲಿ ಪ್ರಕೃತಿದತ್ತವಾಗಿ ಬೆಳೆದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮರಗಳನ್ನು ಕ್ಷಣಾರ್ಧದಲ್ಲಿ ಸರ್ವನಾಶ ಮಾಡುತ್ತಿದ್ದೇವೆ. ಆದರೆ ಅದಕ್ಕೆ ಪರ್ಯಾಯವಾಗಿ ಅದೆಷ್ಟು ಮರಗಳನ್ನು ಸಾಕಿ ಬೆಳೆಸಿದ್ದೇವೆ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡರೆ ನಾಲಗೆಯಲ್ಲಿ ಪದಗಳೇ ಉಸುರುವುದಿಲ್ಲ...

ದಿನಗಳೆದಂತೆ ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯ ಎಲ್ಲೆ ಮೀರುತ್ತಿದೆ. ಸಹನೆಯ ಕಟ್ಟೆಯೊಡೆದು ಪ್ರಕೃತಿ ಕೂಡ ಒಂದಿಲ್ಲೊಂದು ಹೊಸ ಹೊಸ ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಲೇ ಇದೆ. ಮಳೆಯನ್ನೇ ನಂಬಿ ಬೆಳೆ ಬೆಳೆಯುವ ರೈತ ಕೂಡ ಸಂಪೂರ್ಣ ಸೋತು ಸುಣ್ಣವಾಗಿದ್ದಾನೆ.

ಇದು ಯಾಂತ್ರಿಕ ಯುಗ. ಈಗ ಎಲ್ಲರಿಗೂ ಸೌಲಭ್ಯಗಳು ಮನೆ ಬಾಗಿಲಿಗೆ ಎಟಕಬೇಕು. ಹೀಗಾಗಿ ಯಾರೂ ಕೂಡ ಕಷ್ಟಪಡಲು ತಯಾರಿಲ್ಲ. ಮರಗಳನ್ನು ಬೆಳೆಸುವ ಬದಲು ಅವುಗಳನ್ನು ಧರೆಗುರುಳಿಸುವ ಬಗ್ಗೆಯೇ ಆಲೋಚಿಸುತ್ತಿದ್ದೇವೆ. ಇಂದು ಮರಗಳು ಮರೆಯಾಗುತ್ತಲೇ ಇವೆ. ಜತೆಗೆ ದಟ್ಟ ಕಾನನವನ್ನು ಕಾಪಾಡಲೆಂದೇ ಸೃಷ್ಟಿ ಮಾಡಿರುವ 'ಅರಣ್ಯ ಇಲಾಖೆ' ಕೂಡ ಅನಾಯಾಸವಾಗಿ ಮಲಗಿದೆ. ಮರಗಳನ್ನು ಬೆಳೆಸಲೆಂದು ಸರಕಾರದಿಂದ ಬಿಡುಗಡೆಯಾಗುವ ಕೋಟಿ ಕೋಟಿ ಹಣ ಎನಾಗಿದೆಯೊ ಗೊತ್ತಿಲ್ಲ ಇದು ಇಂದಿನ ಕತೆಯಲ್ಲ, ಕಳೆದ ಇಪ್ಪತೈದು ವರ್ಷಗಳೀಚೆಗೆ ನಡೆಯುತ್ತಿರುವ ನಿರಂತರ ಪ್ರಕ್ರಿಯೆ.
ದಿನಕಳೆದಂತೆ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ನೂರಾರು ಅಡಿ ಬೋರ್‌ವೆಲ್ ಕೊರೆಯಿಸಿದರೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಗಾಳಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗಿ ಓಜೋನ್ ಪದರ ದಿನನಿತ್ಯ ಹರಿದು ಛಿದ್ರವಾಗುತ್ತಿದೆ. ಜನರ ಆರೋಗ್ಯ ಹದಗೆಟ್ಟು ದಿನಕಳೆದಂತೆ ಹೊಸ ಹೊಸ ಕಾಯಿಲೆಗಳು ದಾಂಗುಡಿಯಿಡುತ್ತಿವೆ. ಜತೆಗೆ ಸರಿಯಾದ ಸಮಯದಲ್ಲಿ ಮಳೆಯಿಲ್ಲದೆ ರೈತರು ಬೀದಿಗೆ ಬೀಳುತ್ತಿದ್ದಾರೆ. ಅನ್ನ, ನೀರಿಲ್ಲದೆ ನಿತ್ಯವೂ ಪರದಾಡುತ್ತಿದ್ದಾರೆ.

ಈಗಾಲೇ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿಯಂತ ಜಿಲ್ಲೆಗಳಲ್ಲಿ ಕುಡಿಯಲು ಕೂಡ ನೀರಿಲ್ಲ. ಬೆಂಗಳೂರಿನಂಥ ಮಹಾನಗರಗಳಲ್ಲಿ ಇದ್ದ ೭೬೧ ಕೆರೆಗಳೂ ಮಾಯವಾಗಿ ನೀರಿಗಾಗಿ ಹಾಹಾಕಾರ ಶುರುವಾಗುತ್ತಿದೆ. ಆದರೂ ನಗರಗಳ ವಿಸ್ತರಣೆ ಎನ್ನುವುದು ನಿರಂತರವಾಗಿ ನಡೆದೇ ಇದೆ. ಪರಿಸರವನ್ನು ನಾಶ ಮಾಡಿ ಹೀಗೆ ಮಾಡುತ್ತಿರುವ ಅಭಿವೃದ್ಧಿಯಿಂದಲೇ ಮನುಕುಲ ಮಾತ್ರವಲ್ಲ , ಸಕಲ ಜೀವರಾಶಿಗಳೂ ವಿನಾಶದಂಚಿಗೆ ಹತ್ತಿರವಾಗುತ್ತಿವೆ ಎಂಬ ಸತ್ಯದ ಬಗ್ಗೆ ಯಾರೂ ಯೋಚಿಸುತ್ತಿಲ್ಲ.

ಇದಲ್ಲದೆ ಈಗ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ನೆಪದಲ್ಲಂತೂ ಮರಗಳ ಸಾಮೂಹಿಕ ಮಾರಣಹೋಮ ನಡೆಯುತ್ತಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಎಲ್ಲೂ ಮರಗಳನ್ನು ನೆಡುತ್ತಿಲ್ಲ. ಶಿವಮೊಗ್ಗ, ಬೆಳಗಾವಿ, ತುಮಕೂರು, ರಾಯಚೂರು ವಿಭಾಗಗಳಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು ಕೆಶಿಪ್ (ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್) -೧ರ ಅಡಿ ೨,೩೯೫ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದು, ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ರಸ್ತೆಗಳ ನಿರ್ಮಾಣವಾಗುತ್ತದೆ ಎಂಬ ಕಾರಣಕ್ಕೆ ಅಂಧಕಾರದಲ್ಲಿ ಮುಳುಗುವುದು ಯಾವ ನ್ಯಾಯ? ಅಭಿವೃದ್ಧಿ ಬೇಕೆ ಬೇಕು ಎಂದಾದರೆ ಅದಕ್ಕೆ ಪರ್ಯಾಯವಾಗಿ ಮರಗಳನ್ನಾದರೂ ನೆಡಬೇಕಲ್ಲ? ಅದೂ ಇಲ್ಲ. ಗಿಡ ಬೆಳೆಸುವ ಗೋಜಿಗೇ ಹೋಗದೆ ೨,೩೯೫ಕಿ.ಮೀ. ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕೆಶಿಪ್-೧ರ ಅಡಿ ೧,೭೭,೦೦೦ ಮರಗಳನ್ನು ಧರೆಗುರುಳಿಸಲಾಗಿದೆ. ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ೫೫,೫೯೬ ಮರಗಳನ್ನು ಕಡಿದು ಹಾಕಲು ತಂತ್ರ ರೂಪಿಸಲಾಗಿದೆ. ಇದರಲ್ಲಿ ಈಗಾಗಲೇ ೯,೮೦೮ ಮರಗಳನ್ನು ಸರ್ವನಾಶ ಮಾಡಿಯಾಗಿದೆ. ಉಳಿದ ೪೫,೮೦೮ ಮರಗಳಿಗೆ ಸದ್ಯದಲ್ಲಿಯೇ ಕೊಡಲಿ ಏಟು ಬೀಳಲಿದೆ.ಇದು ಕೇವಲ ಸರಕಾರಿ ಜಾಗದಲ್ಲಿರುವ ಮರಗಳ ಸಂಖ್ಯೆ. ಅದರಲ್ಲೂ ಇಲಾಖೆ ನೀಡುವ ಮಾಹಿತಿ. ಖಾಸಗಿ ಜಮೀನು ಸೇರಿದಂತೆ ಲೆಕ್ಕದಿಂದ ತಪ್ಪಿದ ಲಕ್ಷಾಂತರ ಮರಗಳ ಮಾರಣಹೋಮ ನಡೆದಿದೆ ಎನ್ನುವ ಕೂಗು ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಆದರೆ ಇದ್ಯಾವುದೂ ಇಲಾಖೆಯ ಅಥವಾ ಸಂಬಂಸಿದ ಅಕಾರಿಗಳ, ಜನಪ್ರತಿನಿಗಳ ಕಿವಿಗೆ ಬೀಳುತ್ತಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ, ಕೋಟಿಗಟ್ಟಲೆ ಬೆಲೆ ಬಾಳುವ ಮರಗಳನ್ನು ಹೀಗೆ ಹಿಂದು ಮುಂದು ನೋಡದೆ ಗುತ್ತಿಗೆ ಕೊಟ್ಟು ಕತ್ತರಿಸಿ ಹಾಕುವ ಅರಣ್ಯ ಇಲಾಖೆಯ ಅಕಾರಿಗಳಿಗೆ ಅಷ್ಟೇ ಸಲೀಸಾಗಿ ಮರಗಳನ್ನು ಬೆಳೆಸಲು ಆದೀತೆ...? ಖಂಡಿತಾ ಇಲ್ಲ. ಒಂದು ಮರ ಸ್ವತಂತ್ರವಾಗಿ ಬೆಳೆಯಲು ಅಣಿಯಾಗಬೇಕಾದರೆ ಕನಿಷ್ಠ ೭ ವರ್ಷಗಳಾದರೂ ಬೇಕು. ಅಲ್ಲಿಯವರೆಗೆ ಅವುಗಳನ್ನು ಸಹನೆಯಿಂದ ಸಾಕುವ ವ್ಯವಧಾನ ಈ ಅರಣ್ಯ ಇಲಾಖೆಯ ಸಿಬ್ಬಂದಿಗೆ ಇದೆಯೇ?

ಗಿಡ ನೆಡುವ ಅವಕಾಶ ಸಿಕ್ಕಾಗಲೆಲ್ಲಾ ನೀಲಿಗಿರಿ, ಅಕೇಶಿಯಾದಂಥ ಪರಿಸರಕ್ಕೆ ಮಾರಕವಾದ ಗಿಡಗಳನ್ನು ಬೆಳೆಸಿ ಭೂಮಿಯನ್ನು ಹಾಳು ಮಾಡುವುದರ ಜತೆಗೆ ತಮಗೆ 'ಆದಾಯ' ಮಾಡಿಕೊಳ್ಳುವ ಇಂಥವರು ಮಮತೆಯಿಂದ ಮರಗಳನ್ನು ಬೆಳೆಸುವುದಾದರೂ ಎಂದು ? ಅದಿರಲಿ, ಅವುಗಳು ಮನುಷ್ಯನೂ ಸೇರಿದಂತೆ ಪ್ರಾಣಿ, ಪಕ್ಷಿಗಳ ಸಂಕುಲಗಳಿವೆ ನೀಡುವ ಉಸಿರಿಗೆ ಬೆಲೆ ಕಟ್ಟಲಾದೀತೆ...? ಅರಣ್ಯ ಇಲಾಖೆ ಕೇವಲ ನೆಪ ಮಾತ್ರಕ್ಕಿದೆ ಎಂಬ ಮಾತು ಈಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನೈಜವಾಗಿ ಬೆಳೆದ ಕಡೆಗಳಲ್ಲೆಲ್ಲ 'ಪರವಾನಗಿ' ಹೆಸರಿನಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕೆಲವು ಅರಣ್ಯ ಇಲಾಖೆಯ ಅಕಾರಿಗಳೇ ಅಗತ್ಯಕ್ಕಿಂತ ಹೆಚ್ಚು ಮರಗಳನ್ನು ಕತ್ತರಿಸುತ್ತಿರುವುದೂ ಬಹಿರಂಗ ಸತ್ಯ. ಜತೆಗೆ ಅರಣ್ಯ ಇಲಾಖೆ ಹೇಗೆಂದರೆ ಹಾಗೆ ಮರ ಕಡಿಯಲು ನೀಡುತ್ತಿರುವ ಅನುಮತಿಗೆ ಲೆಕ್ಕವೇ ಇಲ್ಲ. ಜತೆಗೆ ಸಣ್ಣಪುಟ್ಟ ಕಾಮಗಾರಿಗಳಾದರೂ ಅದೇ ನೆಪದಲ್ಲಿ ಬೃಹದಾಕಾರದ ಮರಗಳು ನೆಲಕಚ್ಚುತ್ತಿವೆ. ಅವುಗಳಿಗೆ ಯಾವ ಲೆಕ್ಕವೂ ಇಲ್ಲ. ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಹೆಸರಲ್ಲಿ, ಅಂಡರ್‌ಪಾಸ್, ಅಥವಾ ಮೇಲ್ಸೇತುವೆ ಮುಂತಾದ ಕಾರಣಗಳಿಗಾಗಿ ಎರಡು ವರ್ಷದಿಂದೀಚೆ ಐದು ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಶಿವಮೊಗ್ಗ, ಮಂಡ್ಯ, ಕೋಲಾರ, ತುಮಕೂರು, ಬಳ್ಳಾರಿ, ಬೆಂಗಳುರು, ಕೊಪ್ಪಳ ಮುಂತಾದ ನಗರಗಳಲ್ಲಿ ಸಣ್ಣಪುಟ್ಟ ರಸ್ತೆ ವಿಸ್ತರಣೆಗೂ ನೂರಾರು ಮರಗಳನ್ನು ಧರೆಗುರುಳಿಸಲಾಗಿದೆ. ಆದರೆ ಎಲ್ಲೂ ಉತ್ತಮ ತಳಿಯ ಮರಗಳನ್ನು ನೆಟ್ಟಿಲ್ಲ! ಮರಗಳ ಕಳ್ಳಸಾಗಣೆ, ಗಣಿ ಹೆಸರಿನಲ್ಲಂತೂ ಅರಣ್ಯಕ್ಕೆ ಅರಣ್ಯವೇ ಸಮಾಪ್ತಿಯಾಗುತ್ತಿದೆ... ಇವುಗಳ ಬಗ್ಗೆ ಮಾತ್ರ ಪ್ರಶ್ನೆ ಮಾಡುವವರೇ ಇಲ್ಲ.

ಕೆಶಿಪ್ ಅಡಿ ಕಡಿದಿರುವ ಮರಗಳ ಬದಲಿಗೆ ಒಂದು ಕಿ.ಮೀ.ಗೆ ೨೦೦ ಮರಗಳಂತೆ ಮರಗಳನ್ನು ಬೆಳೆಸಿ ನೆಡಲು ಹಾಗೂ ೭ವರ್ಷಗಳ ವರೆಗೆ ಅವುಗಳ ಮುತುವರ್ಜಿ ನೋಡಿಕೊಳ್ಳಲು ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್ ಹಾಗೂ ಅರಣ್ಯ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಅದಕ್ಕೆ ತಗಲುವ ವೆಚ್ಚವನ್ನೂ ಕೆಶಿಪ್ ಭರಿಸಲು ಒಪ್ಪಿಗೆ ನೀಡಿ, ಹಂತ ಹಂತವಾಗಿ ಹಣ ನೀಡುತ್ತಿದೆ. ಆದರೆ ಇಲ್ಲೂ ಅರಣ್ಯ ಇಲಾಖೆ ಇನ್ನೂ ಒಂದೇ ಒಂದು ಗಿಡಗಳನ್ನೂ ಎಲ್ಲೂ ನೆಟ್ಟಿಲ್ಲ !

ಸಂಪದ್ಭರಿತವಾದ ಕಾಡುಗಳನ್ನು ಕಡಿದು ಅಲ್ಲಿ ಜೀವ ವೈವಿಧ್ಯ ವಿರೋ ನೀಲಿಗಿರಿ, ಅಕೇಶಿಯಾ ಬೆಳೆಸಿದ ರೀತಿಯಲ್ಲಿ ರಸ್ತೆಯುದ್ದಕ್ಕೂ ಅರಣ್ಯ ಇಲಾಖೆ ನಾಳೆ ಇದೇ ಮರಗಳನ್ನು ನೆಟ್ಟರೆ ಭೂಮಿಯ ತಾಪಮಾನ ಈಗಿನದ್ದಕ್ಕಿಂತ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಅಂತರ್ಜಲದ ಮಟ್ಟ ಪಾತಾಳ ಸೇರಿ ಕೋಲಾರ ಜಿಲ್ಲೆಯಲ್ಲಿರುವ ನೀರಿನ ಸಮಸ್ಯೆ ಇಡೀ ರಾಜ್ಯಕ್ಕೆ ವಕ್ಕರಿಸಿಕೊಳ್ಳುವುದು ನಿಶ್ಚಿತ. ಆದ್ದರಿಂದ ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಜನಸಾಮಾನ್ಯರೂ ಕೂಡ ಇಂಥ ಮಾರಕ ಹಾಗೂ ಅನಾವಶ್ಯಕ ಅಭಿವೃದ್ಧಿ, ಪರಿಸರ ವಿರೋದಿ ನಿರ್ಧಾರಗಳ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೊಂದು ದಿನ ಉಸಿರಾಡಲೂ ಕೂಡ ಹಣ ನೀಡಿ ಆಮ್ಲಜನಕವನ್ನು ಖರೀದಿಸಬೇಕಾದ ದಿನ ದೂರವಿಲ್ಲ !

ಸೋಮವಾರ, ಸೆಪ್ಟೆಂಬರ್ 20, 2010

ಚಾಮರಾಜನಗರ ಜಿಲ್ಲೆಯಲ್ಲಿ 400 ಹೆಕ್ಟೇರ್‌ನಲ್ಲಿ ಹೊಂಗೆ ಸಸಿ ನೆಡಲು ನಿರ್ಧಾರ

ಜುಲೈ 9ರ ಪ್ರಜಾವಾಣಿ ವಾರ್ತೆ

400 ಹೆಕ್ಟೇರ್‌ನಲ್ಲಿ ಹೊಂಗೆ ಸಸಿ ನೆಡಲು ನಿರ್ಧಾರ
ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರ ಸಿದ್ಧ


ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೈವಿಕ ಇಂಧನದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ಜುಲೈ 9ರಂದು ಉದ್ಘಾಟನೆಗೊಂಡಿದೆ.

'ರಾಜ್ಯ ಸರ್ಕಾರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಈ ಕೇಂದ್ರ ಕಾರ್ಯಾರಂಭ ಮಾಡಿದೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ನಿತ್ಯ 150 ಲೀ. ಜೈವಿಕ ಇಂಧನದ ಉತ್ಪಾದನಾ ಗುರಿ ಹೊಂದಲಾಗಿದೆ. ರೈತರಿಂದ ಹೊಂಗೆ, ಬೇವು ಸೇರಿದಂತೆ ಜೈವಿಕ ಇಂಧನದ ಬೀಜ ಖರೀದಿಸಲಾಗುವುದು.

ಕೇಂದ್ರದ ಸ್ಥಾಪನೆಗೆ ಸರ್ಕಾರ 10 ಲಕ್ಷ ರೂ ನೀಡಿದೆ. ಇದರಲ್ಲಿ ಯಂತ್ರೋಪಕರಣಗಳಿಗೆ 8.50 ಲಕ್ಷ ರೂ ಖರ್ಚಾಗಿದೆ. ಉಳಿದ ಹಣದಲ್ಲಿ ರೈತರಿಂದ ಜೈವಿಕ ಇಂಧನ ಬೀಜಗಳನ್ನು ಖರೀದಿಸಲಾಗುವುದು. ಒಂದು ಕೆಜಿ ಹೊಂಗೆ ಬೀಜಕ್ಕೆ 12 ರೂ ಹಾಗೂ ಬೇವಿನ ಬೀಜಕ್ಕೆ 6 ರೂ ದರ ನಿಗದಿಪಡಿಸಲಾಗಿದೆ. ಒಂದು ಕ್ವಿಂಟಲ್ ಬೀಜದಲ್ಲಿ ಶೇ. 20ರಷ್ಟು ಇಂಧನ ಲಭಿಸಲಿದೆ. ಇದನ್ನು ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಇತರೇ ವಾಹನಗಳ ಬಳಕೆಗೆ ಉಪಯೋಗಿಸಲು ನೀಡಲಾಗುತ್ತದೆ.

'ಜಿಲ್ಲೆಯಲ್ಲಿ ಇಲಾಖೆಯಿಂದ 400 ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಇಂಧನ ಸಸಿ ನೆಡಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗುಂಡಿ ತೆಗೆಯಲಾಗುತ್ತದೆ. ಸೆಪ್ಟೆಂಬರ್ ವೇಳೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹೊಂಗೆ ಸಸಿ ನೆಡಲಾಗುವುದು' ಎಂದು ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ. ರಾಜು ತಿಳಿಸಿದರು.

ಜಿಲ್ಲೆಯ ರೈತರು ಹೆಬ್ಬೇವಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈಗ ಇಲಾಖೆಯಿಂದ ಹೊಂಗೆ ಸಸಿ ನೆಡುವ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕನಿಷ್ಠ ಆರು ತಿಂಗಳ ಅವಧಿಯ ಹೊಂಗೆ ಸಸಿ ನೆಡಲು ನಿರ್ಧರಿಸಲಾಗಿದೆ. ಸಸಿ ನೆಟ್ಟ ನಾಲ್ಕು ವರ್ಷದಲ್ಲಿ ಬೀಜ ದೊರೆ ಯಲಿದೆ. ನಂತರದ ವರ್ಷಗಳಲ್ಲಿ ಇಳುವರಿ ಹೆಚ್ಚಲಿದ್ದು, ರೈತರಿಗೆ ಆದಾಯ ಬರಲಿದೆ ಎಂದರು.

ಸದ್ಯಕ್ಕೆ ಕಸಿ ಮಾಡಿರುವ ಹೊಂಗೆ ಸಸಿ ನೆಡುತ್ತಿಲ್ಲ. ಪಾಳುಬಿದ್ದ ಜಮೀನುಗಳಲ್ಲೂ ಹೊಂಗೆ ಸಸಿ ನೆಡುವ ಗುರಿಯಿದೆ. ಜಿಲ್ಲೆಯಲ್ಲಿರುವ 40 ಸಾವಿರ ಎಕರೆ ಅರಣ್ಯೇತರ ಜಮೀನಿನಲ್ಲೂ ಜೈವಿಕ ಇಂಧನ ಸಸಿ ನೆಡುವ ಉದ್ದೇಶ ಹೊಂದಲಾಗಿದೆ.

ಪ್ರತಿವರ್ಷ ಸುಮಾರು 500 ಹೆಕ್ಟೇರ್ ಪ್ರದೇಶಕ್ಕೆ ಈ ಯೋಜನೆ ವಿಸ್ತರಿಸಲಾಗುವುದು. ರಸ್ತೆ ಬದಿ ಸೇರಿದಂತೆ ರೈತರ ಜಮೀನಿನ ಬದುಗಳಲ್ಲೂ ಸಸಿ ನೆಡುವ ಗುರಿಯಿದೆ. ಮುಂದಿನ ಐದಾರು ವರ್ಷಗಳಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸರಕು ಲಭಿಸಲಿದೆ.

ಶನಿವಾರ, ಸೆಪ್ಟೆಂಬರ್ 18, 2010

ಪರಿಸರ ಸಂರಕ್ಷಣೆಗೆ ನಾವೆಲ್ಲಾ ಪಣ ತೊಡಣ.


ದಶಕೂಪ ಸಮೋವಾಪಿ, ದಶವಾಪೀ ಸಮೋಹ್ರದಃ|
ದಶ ಹ್ರದಸ್ಸಮಃ ಪುತ್ರೋ, ದಶಪುತ್ರಃ ಸಮೋದ್ರುಮಃ||

ಅಂದರೆ, "ಒಂದು ಕೆರೆ ಹತ್ತು ಬಾವಿಗಳಿಗಿಂತ ಉತ್ತಮ, ಒಂದು ಸರೋವರ ಹತ್ತು ಕೆರೆಗಳಿಗಿಂತ ಉತ್ತಮ, ಹತ್ತು ಸರೋವರಗಳಿಗಿಂತ ಒಬ್ಬ ಸುಪುತ್ರನನ್ನು ಪಡೆಯುವುದು ಉತ್ತಮ, ಇದೆಲ್ಲಕ್ಕಿಂತಲೂ, ಒಂದು ವೃಕ್ಷ ವನ್ನು ಬೆಳೆಸುವುದು ಹತ್ತು ಸುಪುತ್ರರನ್ನು ಪಡೆಯುವುದುಕ್ಕಿಂತ ಉತ್ತಮ". ಮನುಷ್ಯನ ಬದುಕು ನಿರ್ಬರವಾಗಿರುವುದು ಪ್ರಕೃತಿಯ ಮೇಲೆ. ಪರಿಸರ ತನ್ನೆಲ್ಲಾ ಕೊಡುಗೆಗಳನ್ನು ಕೊಟ್ಟು ನಮ್ಮನ್ನು ಬೆಳೆಸುತ್ತದೆ. ಪರಿಸರ ಎಂದಾಗ ಕೇವಲ ವೃಕ್ಷ ಸಂಪತ್ತು ಮಾತ್ರವಲ್ಲ, ಆದರೆ ಉಳಿದ ಎಲ್ಲಾ ಸಂಪತ್ತಿಗೂ ವೃಕ್ಷ ಸಂಪತ್ತೇ ಆದಾರವಾಗಿರುವುದರಿಂದ ಪರಿಸರವೆಂದಾಕ್ಷಣ ಮರದ ಕಲ್ಪನೆ ಮೂಡುತ್ತದೆ. ನಮ್ಮ ಸಂಸ್ಕೃತಿ ಪರಿಸರಕ್ಕೆ ನೀಡಿದ ಪ್ರಾಧಾನ್ಯತೆಯನ್ನು ಬೇರಾವುದಕ್ಕೂ ನೀಡಿಲ್ಲ.
ಪರಿಸರ ಮನುಷ್ಯನಿಗೆ ತನ್ನೆಲ್ಲಾ ಕೊಡುಗೆಗಳನ್ನು ನೀಡಿದೆ. ಕುಡಿಯಲು ಜಲ, ಬದುಕಲು ನೆಲ, ಉಸಿರಾಡಲು ಶುದ್ಧ ಗಾಳಿ, ಹೀಗೆ ಹತ್ತು ಹಲವು. ಪ್ರಕೃತಿ ವೈಜ್ಞಾನಿಕತೆಗೂ ಮೀರಿ, ಎಲ್ಲವನ್ನೂ ವ್ಯವಸ್ಥಿತವಾಗಿರಿಸಿದೆ. ತನ್ನ ಗರ್ಭದಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಅಲ್ಲಲ್ಲೇ ಬದುಕಲು ಆಹಾರಾದಿಗಳನ್ನು ಓದಗಿಸಿದೆ. ತನ್ನ ಸಮತೋಲನವನ್ನು ಕಾಪಾಡಲು ಜೀವಚಕ್ರವನ್ನು ನಿರ್ಮಿಸಿದೆ. ತನ್ನ ನಿರಂತರತೆಯನ್ನು ಕಾಪಿಟ್ಟುಕೊಳ್ಳಲು ಗಂಡು ಹೆಣ್ಣೆಂಬ ಪ್ರತ್ಯೇಕತೆಯನ್ನು ಸೃಷ್ಟಿಸಿದೆ. ವಿಜ್ಞಾನ ತನ್ನ ಶೋಧದಿಂದ ಬಯಲು ಮಾಡಲಾಗದ ಅದೆಷ್ಟೋ ವಿಚಿತ್ರಗಳನ್ನು ತನ್ನೋಳಗೆ ಹುದುಗಿಸಿಕೊಂಡಿದೆ. ನಮ್ಮ ಪೂರ್ವಜರು ಪರಿಸರದೊಂದಿಗೆ ಹೊಂದಿದ್ದ ಅನುಬಂಧವನ್ನು ನಾವಿಂದು ಹೊಂದಿಲ್ಲ. ಮುಂದಿನ ನಮ್ಮ ತಲೆಮಾರು ಪರಸರದ ಕುರಿತಾದ ಅರಿವನ್ನೇ ಹೊಂದಿರುವುದಿಲ್ಲ. ಜನ್ಮ ಕೊಟ್ಟ ತಾಯನ್ನೇ ಮರೆಯುವ ನಾವು ಜೀವನ ಕೊಟ್ಟ ಪರಿಸರವನ್ನು ಮರೆತರೆ ಅಚ್ಚರಿಯೇನು?!
ಮನುಷ್ಯ ಎಂಬ ಶಬ್ದವು ಗುಣವಾಚಕ. ಮನುಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ಒಬ್ಬ ಮಾನವನಾಗಬಹುದೇ ಹೊರತು, ಮನುಷ್ಯನಾಗಲಾರ. ಯಾವನು ಮನೀಷಿಯೋ ಅವ್ನು ಮಾತ್ರವೇ ಮನುಷ್ಯನಾಗುತ್ತಾನೆ. ಅಂದರೆ, ಯಾವನು ಪ್ರಜ್ನೆಯುಳ್ಳವನೋ, ವಿವೇಕಶಾಲಿಯೋ ಅವನು ಮಾತ್ರವೇ ಮನುಷ್ಯನು. ಆದರೆ ಪ್ರಜ್ಞಾಪೂರ್ಣ, ವಿವೇಕಶಾಲಿ ಮನುಷ್ಯ ತನ್ನ ಅಮಿತವಾದ ಆಸೆಯನ್ನು ಇಡೇರಿಸಿಕೊಳ್ಳುವುದಕ್ಕೆ ಪರಿಸರದ ಮೇಲೆ ಪ್ರಹಾರ ಮಾಡುತ್ತಾನೆ. ಸಹನಾ ಮೂರ್ತಿಯಾದ ಪರಿಸರ ಆವಾಗಲೇ ತನ್ನ ಪ್ರಭಾವವನ್ನು ತೋರಿಸುವುದು. ಚಂಡಮಾರುತ, ಕ್ಷಾಮ, ಸುನಾಮಿಯೇ ಮೊದಲಾದ ಮಾರಣಹೋಮ ನೆಡೆಯುವುದು ಈ ಕಾರಣದಿಂದ. ತನ್ನ ಮೈಗೆ ಕಲ್ಲೆಸೆದವರಿಗೆ ತಿರುಗಿ ಹಣ್ಣನ್ನು ನೀಡುವ ಮರವನ್ನು ಮುಲಾಜಿಲ್ಲದೇ ಕಡಿಯುವವರು ನಾವು. ಯಾವ ಭೂಗರ್ಭದಲ್ಲಿ ಬಂಗಾರ ದೊರೆಯುವುದೋ ಅದೇ ಭೂಗರ್ಭವನ್ನು ಬರಿದಾಗಿಸಹೊರಟವರು ನಾವು. ಛೇ!! ಹೆತ್ತ ತಾಯ ಕರುಳ ಬಾಗೇವ ನೀಚರು ನಾವು…!
ಗೆಳೆಯರೇ, ನಾವು ನಮ್ಮ ಮುಂದಿನ ಪೀಳಿಗೆಯನ್ನು ಕಾಣಬೇಕಾದರೆ, ನಮ್ಮ ಈ ದರಣಿಯನ್ನು ಮುಂದಿನವರಿಗಾಗಿ ಉಳಿಸಲೇಬೇಕಾಗಿದೆ. ಈ ಕುರಿತು ನಾವು ಮಾಡುವ ಕಾರ್ಯದ ಕುರಿತು ಚಿಂತನೆ ಅಗತ್ಯ. ಬರೀ ಮಾತು ಯಾ ಒಂದು ಲೇಖನ ಪ್ರಯೋಜನಕ್ಕೆ ಬಾರದು. ಇದು ಸಾರ್ಥಕವಾಗುವುದು ನಾವು ಈ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆಯಿಟ್ಟಾಗ. ಆದುದರಿಂದ ಗೆಳೆಯರೇ, ನಾವು ನೀವೆಲ್ಲಾ ಮಾಡಬೇಕಾದದ್ದು ಏನೆಂದರೆ -
  • ನಾವು ವರ್ಷಕ್ಕೆ ಒಂದಾದರೂ ಗಿಡ ನೆಡಬೇಕು.
  • ಸೌಕರ್ಯ ಇಲ್ಲದವರು ಗಿಡ ನೆಡುವವರನ್ನಾದರೂ ಪ್ರೋತ್ಸಾಹಿಸಬೇಕು.
  • ನಮ್ಮ ಮಕ್ಕಳಿಗೆ ಪರಿಸರದ ಮಹತ್ವವನ್ನು ವಿವರಿಸಬೇಕು.
  • ನಮಗೆ ತಿಳಿದಷ್ಟು ಮರ-ಗಿಡ, ಪ್ರಾಣಿ-ಪಕ್ಷಿಗಳ ಬಗ್ಗೆ ನಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕು.
  • ಒಟ್ಟಾರೆ ನಮ್ಮ ನೆಲ-ಜಲ ಸಂರಕ್ಷಣೆಗೆ ಪಣ ತೊಡಬೇಕು.
ನಿಮ್ಮ ಅಭಿಮತವನ್ನು ತಪ್ಪದೇ ತಿಳಿಸಿ….

ಬುಧವಾರ, ಸೆಪ್ಟೆಂಬರ್ 15, 2010

ಜೈವಿಕ ಕಾರ್ಯಪಡೆ

ವಿಶ್ವದೆಲ್ಲೆಡೆ ಪೆಟ್ರೋಲ್ ಡೀಸಲ್‌ಗಳಿಗೆ ಪರ್ಯಾಯ ಶಕ್ತಿಮೂಲಗಳ ಹುಡುಕುವಿಕೆ ಅವಿರತವಾಗಿ ನಡೆದಿದೆ. ಆದರೆ ಭಾರತದ ಬಹಳಷ್ಟು ಆದಾಯ ಆಮದು ಮಾಡಿಕೊಳ್ಳುತ್ತಿರುವ ಶಕ್ತಿಮೂಲಗಳಿಗೇ ವ್ಯಯವಾಗುತ್ತಿದೆ. ಇದನ್ನು ಕಡಿಮೆ ಮಾಡಲು ದೇಶದಲ್ಲಿ ಅವಿತರ ಪ್ರಯತ್ನಗಳು ನಡೆದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೂಡ ಪರ್ಯಾಯ ಶಕ್ತಿಗಮೂಲಗಳಿಗಾಗಿ ನಿರಂತರ ಹುಡುಕಾಟ ನಡೆಸಿವೆ.

ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 2008ರ ಸೆಪ್ಟೆಂಬರ್ ತಿಂಗಳಿನಲ್ಲಿ ಅಗತ್ಯ ಕಾರ್ಯಕ್ರಮ ಕೈಗೊಳ್ಳಲು ಹಾಗೂ ಅದರ ಅನುಷ್ಠಾನಕ್ಕೆ ಅಗತ್ಯ ಮಾರ್ಗಸೂಚಿಗಳನ್ನು ಒಳಗು ಮಾಡಲು ಜೈವಿಕ ಕಾರ್ಯಪಡೆ ರಚಿಸಿತು. ಈ ಕಾರ್ಯಪಡೆಯ ಅಧ್ಯಕ್ಷರಾಗಿ ವೈ.ಬಿ. ರಾಮಕೃಷ್ಣ ಅವರನ್ನು ನೇಮಿಸಿತು.

ರಾಜ್ಯ ಸರ್ಕಾರ ರಚಿಸಿರುವ ಜೈವಿಕ ಕಾರ್ಯಪಡೆಯ ಮೂಲ ಉದ್ದೇಶ ಜೈವಿಕ ಇಂಧನ ಕಾರ್ಯಕ್ರಮ ಅನುಷ್ಠಾನಗೊಳಿಸುವುದು. ಈ ಪೂರಕ ಶಕ್ತಿಮೂಲ ಉತ್ಪಾದನೆಗೆ ಜನರ ಸಹಭಾಗಿತ್ವ, ಜೈವಿಕ ಇಂಧನ ಮೌಲ್ಯವರ್ಧನೆ, ಜೈವಿಕ ಬೀಜ ಉತ್ಪಾದನೆ ಮುಂತಾದವುಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದೇ ಆಗಿದೆ.

ಜೈವಿಕ ಇಂಧನಗಳಾದ ಎಥೆನಾಲ್ ಹಾಗೂ ಬಯೋ ಡೀಸೆಲ್‌ಗಳು ಈಗಾಗಲೇ ದೇಶದಲ್ಲೇ ಪ್ರಥಮಬಾರಿಗೆ ರಾಜ್ಯದಲ್ಲಿ ಶೇ.5ರಷ್ಟು ಬಳಕೆಯಲ್ಲಿದೆ. ರಾಜ್ಯದಲ್ಲಿ ಬಳಸುತ್ತಿರುವ ಪೆಟ್ರೋಲ್ ನಲ್ಲಿ ಇದನ್ನು ಬಳಕೆ ಮಾಡುತ್ತಿದ್ದು ಕಾರ್ಯಪಡೆ ಈ ವರ್ಷಾಂತ್ಯಕ್ಕೆ ಇದನ್ನು ಶೇ.10ಕ್ಕೇರಿಸುವ ಗುರಿ ಹೊಂದಿದೆ. ಬರುವ ದಿನಗಳಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಈಗಿರುವ ಸಸ್ಯ ಮೂಲಗಳ ಜೊತೆಗೆ ಕೃಷಿ ತ್ಯಾಜ್ಯ ಹಾಗೂ ನಗರ ತ್ಯಾಜ್ಯಗಳೆರಡನ್ನು ಜೈವಿಕ ಇಂಧನ ಉತ್ಪಾದಿಸುವ ಅಗತ್ಯ ತಂತ್ರಜ್ಞಾನದ ಬಗ್ಗೆ ಕಾರ್ಯ ರೂಪಿಸಲಾಗುತ್ತಿದೆ ಎನ್ನುತ್ತಾರೆ ರಾಮಕೃಷ್ಣ.

ಕಾರ್ಯಪಡೆ ರಚಿತವಾದ 1 ವರ್ಷದಿಂದೀಚೆಗೆ ರಾಜ್ಯದ 6000 ಹೆಕ್ಟೇರ್‌ನಷ್ಟು ಸರ್ಕಾರದ ಪಾಳುಬಿದ್ದ ಜಮೀನಿನಲ್ಲಿ ಜೈವಿಕ ಇಂಧನ ಉತ್ಪಾದನೆ ಅಗತ್ಯವಾದ ಬೀಜೋತ್ಪಾದನೆಗೆ ಗಿಡ ನೆಡುವ ಕಾರ್ಯ ಯಶಸ್ವಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯವನ್ನು ಸರ್ಕಾರಿ ಹಾಗೂ ಕೃಷಿಯೇತರ ಖಾಸಗಿ ಭೂಮಿ ಸೇರಿ ಒಂದು ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಬೇಕೆಂಬುದು ಕಾರ್ಯಪಡೆಯ ಗುರಿಯಾಗಿದೆ. ಅಲ್ಲಿ ಸುಮಾರು 30 ಲಕ್ಷ ಸಸಿಗಳನ್ನು ನೆಡುವ ಗುರಿ ಇದೆ. ಈಗಾಗಲೇ ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು ಹಾಗೂ ಹರಪನಹಳ್ಳಿ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಎನ್ಆರ್ಈಜಿ ಕಾರ್ಯಕ್ರಮದಡಿ ಈ ಕಾರ್ಯ ಕೈಗೊಳ್ಳಲಾಗಿದೆ.

ಪ್ರತಿ ಸಸಿ ಬೆಳೆಯಲು 22 ರೂಪಾಯಿ ಹಾಗೂ ಸಸಿಯನ್ನು ಉತ್ತಮವಾಗಿ ಬೆಳೆಸಿ ಒಂದು ವರ್ಷ ಪಾಲನೆ ಮಾಡಿದರೆ ಆರು ರೂಪಾಯಿಗಳ ನೆರವು ನೀಡಲಾಗುತ್ತದೆ.ಈಗ ರಾಜ್ಯದಲ್ಲಿ ಬಯೋಡೀಸೆಲ್ ಬಳಕೆ ನಡೆದಿದೆ. ರಸ್ತೆ ಸಾರಿಗೆ ಸಂಸ್ಥೆಯ 2000 ವಾಹನಗಳಲ್ಲಿ ಇದನ್ನು ಇಂಧನ ಮೂಲವಾಗಿ (ಶೇ7.7 ನಷ್ಟನ್ನು ಡೀಸಲ್ ಜೊತೆ) ಬಳಕೆ ಮಾಡುತ್ತಿದ್ದು ಸಾರಿಗೆ ಸಂಸ್ಥೆಯ ಎಲ್ಲ ವಾಹನಗಳಲ್ಲೂ ಬಳಕೆ ಮಾಡುವ ಉದ್ದೇಶವಿದೆ. ಜೈವಿಕ ಇಂಧನ ಬಳಕೆ ಯಶಸ್ವಿಗೊಳಿಸಲು ಹಾಸನ ಜಿಲ್ಲೆ ಮಡೆನೂರು ಬಳಿ ಜೈವಿಕ ಇಂಧನ ಉದ್ಯಾನ ರೂಪಿಸಲಾಗಿದೆ.

ಹಾಸನ ಜಿಲ್ಲೆ 23 ಗ್ರಾಮಗಳಲ್ಲಿ ಸುಮಾರು 350 ಸಹಕಾರ ಸಂಘಗಳು ರಚನೆಗೊಂಡಿವೆ. ಅವುಗಳ ಅಧಿಕೃತ ನೋಂದಣಿ ಇನ್ನೂ ಆಗಬೇಕಿದೆ. ಕಾಲಕ್ಕೆ ತಕ್ಕಂತೆ ಪರ್ಯಾಯ ಇಂಧನ ಉತ್ಪಾದನೆಗೆ ಹೊಂಗೆ, ಬೇವು, ಹಿಪ್ಪೆ, ಜತ್ರೋಪ ಇತ್ಯಾದಿಗಳನ್ನು ಬೆಳೆಯಬಹುದಾಗಿದೆ
ರಾಜ್ಯದಲ್ಲಿ ಪ್ರಸ್ತುತ 5.75 ಲಕ್ಷ ಟನ್ ಹೊಂಗೆ ಬೀಜ ಉತ್ಪಾದನೆ ಆಗುತ್ತಿದೆ. ಕಾರ್ಯಪಡೆ ಜೈವಿಕ ಶಕ್ತಿ ಉತ್ಪಾದನೆ ಹಾಗೂ ಬಳಕೆಯ ಯಶಸ್ವಿ ಅನುಷ್ಠಾನಕ್ಕೆ ಜೈವಿಕ ಇಂಧನ ಮಂಡಳಿ ರಚನೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಜೈವಿಕ ಕಾರ್ಯಪಡೆ ಕಚೇರಿಯು ಬೆಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ವೀದಿಯ ಬಹುಮಹಡಿ ಕಟ್ಟಡದ 5ನೇ ಹಂತದಲ್ಲಿರುವ 6ನೇ ಕೊಠಡಿಯಲ್ಲಿದೆ.

ಶುಕ್ರವಾರ, ಸೆಪ್ಟೆಂಬರ್ 10, 2010

ಜೈವಿಕ ಇಂಧನ ಸ್ವಾವಲಂಬಿ ಕೃಷಿ ಬದುಕಿನ ಶಕ್ತಿ

ಇತ್ತೀಚಿನ ದಿನಗಳಲ್ಲಿ ವಿಶ್ವದ ಜನಸಂಖ್ಯೆ ಏರುತ್ತಲೆ ಇದೆ. ಜೊತೆಗೆ ವಿವಿಧ ರೀತಿಯ ವಾಹನಗಳ ಸಂಖ್ಯೆಯು ಕೂಡ ಜಾಸ್ತಿಯಾಗುತ್ತಿದೆ. ಈ ಕಾರಣದಿಂದ ಪ್ರತಿ ದಿನವು ವಿಶ್ವದ ಇಂಧನ ಬೇಡಿಕೆ ಗಣನೀಯವಾಗಿ ಏರುತ್ತಿದೆ. ಅಂಕಿ ಅಂಶಗಳ ಪ್ರಕಾರ ಭೂಗರ್ಭದಲ್ಲಿ ಸಿಗುವ ಇಂಧನ ಮೂಲಗಳು ಇನ್ನು ಕೆಲವೇ (20-30ವರ್ಷ) ವರ್ಷಗಳಲ್ಲಿ ಬರಿದಾಗಿ ಹೋಗುವ ಮುನ್ಸೂಚನೆ ಇದೆ. ಅಂತಹ ಸಮಯದಲ್ಲಿ ಇಂಧನ ಸಮಸ್ಯೆಯೆಂಬುದು ಎಲ್ಲರನ್ನು ದೊಡ್ಡ ಭೂತವಾಗಿ ಕಾಡಬಹುದು.
 ಈ ಮೇಲಿನ ಎಲ್ಲಾ ಕಾರಣಗಳನ್ನು ಗಮನಿಸಿದರೆ, ಈಗ ಬಳಸುತ್ತಿರುವ ಸಾಂಪ್ರದಾಯಿಕ ಇಂಧನಗಳ ಜೊತೆಗೆ ನವಿಕರಿಸಬಹುದಾದ ಜೈವಿಕ ಇಂಧನವನ್ನ ಉತ್ಪಾದಿಸಿ ಉಪಯೋಗಿಸಿದರೆ ಮುಂದೆ ಕಾಡುವ ಒಂದು ದೊಡ್ಡ ಭೂತವನ್ನು ಸುಲಭವಾಗಿ ಎದುರಿಸಬಹುದು.
  
ಈಗ ಅಭಿವೃದ್ಧಿಶೀಲವಾಗಿರುವ ಭಾರತ ಮುಂದಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಸಾಧ್ಯವಾದಷ್ಟು ಇಂಧನವನ್ನು ಅಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ತನ್ನಲ್ಲಿಯೇ, ಅವಶ್ಯಕವಾದ ಬದಲಿ ಇಂಧನ ಉತ್ಪತ್ತಿ ಮಾಡಬೇಕು. ಹೇರಳವಾದ ನಿಸರ್ಗ ಸಂಪತ್ತು ನಮ್ಮಲ್ಲಿಯೆ ಇದೆ. ಆದುದರಿಂದ ಬದಲಿ ಇಂಧನ ಮೂಲಗಳನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಪ್ರಾಕೃತಿಕವಾಗಿ ದೊರೆಯುವ ಸಸ್ಯಮೂಲಗಳಿಂದ ಜೈವಿಕ ಇಂಧನ ಉತ್ಪಾದನೆ ಹಾಗೂ ಪ್ರಕೃತಿಯ ಸಹಜತೆಯನ್ನು ಸುಸ್ಥಿರ ಸ್ಥಿತಿಗೆ ತರುವುದು ಅವಶ್ಯಕವಾಗಿದೆ. ಈ ಸಸ್ಯ ಮೂಲಗಳನ್ನು ಕೃಷಿಕರು ತಮ್ಮ ಜಮೀನಿನ ಬದುಗಳಲ್ಲಿ, ಹಿತ್ತಲು, ಸಾಮೂಹಿಕ ಸ್ಥಳಗಳು ಹಾಗೂ ಬಂಜರು ಭೂಮಿಯಲ್ಲಿ ಬೆಳೆಯಬಹುದಾಗಿದೆ.

ಪ್ರಮುಖವಾಗಿ ಹೊಂಗೆ, ಬೇವು, ಹಿಪ್ಟೆ, ಸಿಬರೂಬಗ್ಲಾಕ, ಜಟ್ರೋಪ ಇನ್ನಿತರ ಹಲವಾರು ಸಸ್ಯಗಳ ಮೂಲಕ ಬಯೋಡೀಸಲ್ (ಜೈವಿಕ ಇಂಧನ) ಉತ್ಪಾದನೆ ಮಾಡಬಹುದಾಗಿದೆ. ಜೋಳ, ಕಬ್ಬು, ಬೀಟ್ರೂಟ್, ಮುಸುಕಿನ ಜೋಳಗಳಂತ ಬೆಳೆಗಳು ಮತ್ತು ಕೊಳೆತ ಉಪಯೋಗಕ್ಕೆ ಬಾರದ ಹಣ್ಣು ತರಕಾರಿಗಳನ್ನು ಇಥೆನಾಲ್ ಉತ್ಪಾದನೆಗಾಗಿ ಬಳಸಬಹುದಾಗಿದೆ. ಬಯೋಡೀಸಲ್ಅನ್ನು ರೈತರು ತಮ್ಮ ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು. ಕಾಲಕ್ಕೆ ತಕ್ಕಂತೆ ದೊರೆಯುವ ಬೀಜಗಳನ್ನು ಶೇಖರಣೆ ಮಾಡಿಕೊಂಡು, ಅವುಗಳನ್ನು ಪುಟ್ಟ ವಾಕ್ವಾಫೆಲ್ಲಿರ್-(ಗಾಣ) ಯಂತ್ರದ ಮುಖಾಂತರ ಎಣ್ಣೆ ತೆಗೆಯಬೇಕು. ಒಂದು ಲೀಟರ್ ಹೊಂಗೆ ಎಣ್ಣೆಗೆ 100-150 ಎಮ್ಎಲ್ ಇಥಿನಾಲ್ ಮತ್ತು 10-15 ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಅನ್ನು ಬೆರೆಸಿ ಚೆನ್ನಾಗಿ ಕಲಕಿ ಒಂದು ದಿವಸ ಹಾಗೆ ಇಡಬೇಕು. ಮೇಲ್ಬಾಗದಲ್ಲಿ ಬಯೋಡೀಸಲ್ ಶೇಖರಗೊಂಡರೆ, ತಳಭಾಗದಲ್ಲಿ ಗ್ಲಿಸರೀನ್ ಉಪಉತ್ಪನ್ನ ಶೇಖರಗೊಳ್ಳುತ್ತದೆ. ಗ್ಲಿಸರಿನ್ ಅನ್ನು ಬೇರ್ಪಡಿಸಿದರೆ, ಬಳಸಲು ಯೋಗ್ಯವಾದ ಬಯೋಡೀಸಲ್ ದೊರೆಯುತ್ತದೆ.

ಬಯೋಡೀಸಲ್ ಪ್ರಯೋಜನಗಳು:-
* ಪರಿಸರ ಸ್ನೇಹಿ ಜೈವಿಕ ಇಂಧನ
* ಎಣ್ಣೆ ಅಂಶ ಚೆನ್ನಾಗಿ ಇರುವುದರಿಂದ, ವಾಹನಗಳು ಸುಲಭವಾಗಿ ತಿರುಗುವುದರಿಂದ, ಅವುಗಳ ಆಯಸ್ಸು ಹೆಚ್ಚುತ್ತದೆ.
* ಎಣ್ಣೆ ಬೇರ್ಪಡಿಸಿದ ನಂತರ ದೊರೆಯುವ ಮಡ್ಡಿ (ಹಿಂಡಿ) ಉತ್ತಮ ಸಾವಯವ ಗೊಬ್ಬರವಾಗುತ್ತದೆ.
* ಎಲ್ಲದಕ್ಕಿಂತ ಹೆಚ್ಚಾಗಿ ಖರ್ಚಿಲ್ಲದೆ ಸ್ವಂತ ಬಳಕೆಗೆ ಅವಶ್ಯಕವಾದ ಡೀಸಲ್ಅನ್ನು ತಯಾರು ಮಾಡಿಕೊಳ್ಳಬಹುದು.

ಅರ್ಥಿಕ ಲೆಕ್ಕಾಚಾರ:-
ಒಂದು ಲೀಟರ್ ಹೊಂಗೆ ಎಣ್ಣೆ ಉತ್ಪಾದನೆ ಮಾಡಲು 3.5 ಕೆ.ಜಿ. ಹೊಂಗೆ ಬೀಜಬೇಕಾದರೆ, 100ಎಮ್ಎಲ್ ಇಥೆನಾಲ್, 15 ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಬೇಕು.

ಖರ್ಚು :-
3.5 ಕೆ.ಜಿ. ಹೊಂಗೆ ಬೀಜದ ಬೆಲೆ 35 ರೂ. (10 ರೂ./ಕೆ.ಜಿ)
ಎಥಿನಾಲ್, ಸೋಡಿಯಂ ಹೈಡ್ರಾಕ್ಸೈಡ್, ಪ್ರೋಸಸಿಂಗ್ ಖರ್ಚು 08 ರೂ.
ಒಟ್ಟು 43 ರೂ.

ಆದಾಯ:-
1 ಲೀಟರ್ ಬಯೋಡಿಸಲ್ 40 ರೂ.
2.5 ಕೆ.ಜಿ. ಹೊಂಗೆ ಇಂಡಿ 15 ರೂ.
200 ಎಂಎಲ್ ಗ್ಲಿಸರೀನ್ 6 ರೂ.
ಒಟ್ಟು 61 ರೂ.

ಈ ಮೂಲಕ ಲೆಕ್ಕಾಚಾರದ ಅಂಕಿಅಂಶಗಳನ್ನು ಗಮನಿಸಿದರೆ, ಬಯೋಡೀಸಲ್ ಉತ್ಪಾದನೆ ಲಾಭದಾಯಕ ಮತ್ತು ಸ್ವಾವಲಂಬಿ ವಿಧಾನವಾಗಿದೆ. ಬೇಗಬೇಗ ಬದಲಾಗುತ್ತಿರುವ ಈ ಕಾಲದಲ್ಲಿ ಕೃಷಿಕರು ಇತರ ವರ್ಗಗಳಂತೆ ಸಮನಾಗಿ ಜೀವನ ನಡೆಸಬೇಕು ಎಂದುಕೊಂಡರೆ, ಹಿಂದಿನ ಹಿರಿಯರ ಅನುಭವದೊಂದಿಗೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯು ಸಹ ಉದ್ಯಮ ಎಂದು ಪರಿಗಣಿಸಿ, ಮುನ್ನೆಡೆಯಬೇಕು.

ಮಂಗಳವಾರ, ಸೆಪ್ಟೆಂಬರ್ 7, 2010

ಅರಳಿ ಮರಗಳಡಿ ಅರಳಿದ ಗ್ರಾಮ

OÚßÈÚßmÛ }ÛÄàP«Ú ÔæVÚsæ VÛÃÈÚߥÚÆÇ OÛÆmæàosÚ«æ OÚMt¥Úߧ @ÁÚØÈÚßÁÚ. JM¥ÚÄÇ, GÁÚsÚÄÇ. †Û¬Væ aÚ~à Õt¥ÚM}æ OÛ{ÑÚßÈÚ «ÚàÁÛÁÚß ÈÚßÁÚVÚ×Úß.

@¥Úà J®Ú°KÁÚyÈÛW OÚmæo OÚno¥Ú @ÁÚØ(@ËÚ‡}Ú¤)ÈÚßÁÚVÚ×Úß. OÚyß| ÔÛ¿ßÒ¥ÚÅæÇÄÇ BÈÚâ OÛ{Ò¥ÛVÚ, ÈÚßÁÚVÚ×Ú @t¾ÚßÆÇ «Úsæ¾ÚßßÈÚ É¥ÚÀÈÚáÛ«ÚVÚ×Úß BÈÚâVÚ×Ú …VæX B«Ú"ÎÚßo OÚß}ÚàÔÚÄ ÈÚßàtÒ¥ÚÈÚâ.

@ÅæàÇM¥Úß OÚmæo¾ÚßÆÇ ÈÚßÕ×æ¾ÚßÁÚß ÑÚß}Úß¡ ÔÛOÚß~¡¥Û§Áæ.

3,7,11.... G{ÑÚß}Ú¡ G{ÑÚß}Ú¡ «Ú«ÚVæ }ÚÅæÑÚß}Úß¡ …M¥ÚÁÚà ÑÚß}Úß¡ ~ÁÚßVÚß~¡ÁÚßÈÚ ÈÚßÕ×æ¾ÚßÁÚ D}ÛÓÔÚ PM_}Úà¡ PÐÞ{ÑÚÆÄÇ. BÅæàÇM¥Úß @ÁÚØOÚmæo¾Úß ÈæßÞÅæ OÚàÆ OÛ½OÚÁÚß ®ÚmÛoMVÚ Ôæàsæ¾Úßß}Ú¡ ÉËÚÃÉßÑÚß~¡¥Û§Áæ. ÈÚß}æà¡M¥Úß OÚmæo¾Úß ÈæßÞÅæ †Û×æÔÚyß|, G×æ¬ÞÂ«Ú ÈÚáÛÁÛl ºÚÁÚ¦M¥Ú «Úsæ¾Úßß~¡¥æ. ÈÚßVÚ¥æàM¥Úß OÚmæo¾Úß ÈæßÞÅæ OÚßOÚQÁÚßVÛÆ«ÚÆÇ OÚßØ}Ú ÈÚßÕ×æ¾ÚßÁÚß OÚÉOÛy¥Ú ÁÚÔÚÑÚÀÈÚನ್ನೂ OÚmæo®Úâ´ÁÛy¥Ú ÈÚßàÄOÚ ËæàÞƒÑÚß~¡¥Û§Áæ. @ÈæßÂOÚ¥Ú @¨Ú´ÀOÚÐ …ÁÛOé J†ÛÈÚáÛÂM¥Ú Õt¥Úß OÚàÆOÛ½OÚÁÚ …¥ÚßP«Ú _}ÚÃyVÚ×Úನ್ನೂ C OÚmæoVÚ×Úß }æÁæ¦sÚß}Ú¡Èæ.

OÚmæo¾Úß OÚ¢æVÚ×Úß ¬dOÚàQ @^Ú`Â¥Û¾ÚßOÚÈÛWÈæ. ÔæVÚsæ VÛÃÈÚß¥Ú ÈÚßÕ×æVæ ÈÚߥÚßÈæ¾ÚáÛW OæÄ ÈÚÁÚÐVÚ×Úß OÚ×æ¥ÚÁÚà ÈÚßOÚQ×ÛVÚÆÄÇ GM¥ÚÁæ AOæ @ÁÚØÈÚßÁÚ «ælßo OÚmæo OÚnoÒ ®Úãeæ ÑÚÆÇÑÚßÈÚâ¥ÛW ÔÚÁÚOæ ÔæàÁÚß}Û¡×æ. B¥Úß GÄÇÂVÚà Væà~¡ÁÚßÈÚ ÑÚM®ÚÃ¥Û¾Úß. ÔÚÁÚOæ Ôæà}Ú¡ GÄÇÂVÚà ÑÚM}Û«Ú®ÛÚáÛW¥æ¾æß BÄÇÈæ G«Úß"ÈÚâ¥Úß †æÞÁæ É^ÛÁÚ. A¥ÚÁæ «ælo @ÁÚØWsÚÈÚ«Úß" ÈÚáÛ}Úà ÈÚßVÚßÉ«ÚM}æ @OÚQÁæ¿ßM¥Ú †æ×æÒ¥Úߧ ÈÚáÛ}Úà ÑÚ}ÚÀ. B¥ÚOæQ @ÆÇÁÚßÈÚ @ÁÚØÈÚßÁÚVÚ×Úß, @¥ÚOæàQM¥Úß OæM®Úâ´OÚÆÇ«Ú OÚmæoVÚ×æÞ ÑÛPоÚáÛWÈæ. _OÚQ WsÚ «ælßo ÈÚÁÚÐÉtÞ ¬ÞÁæÁæ¥Úß ®æãÞÏÒ¥Ú ¬ÞÁæ¾ÚßÁæ ÔæVÚsæ¾ÚßÆÇ @ËÚ‡}Ú¤ÈÚßÁÚVÚ×Ú OÛÃM~Væ OÛÁÚyÁÛ¥ÚÈÚÁÚß.

ÔæVÚsæ¾Úß ËÛM~OÛM†Û ¥æÞÉ, OÛ«ÚÈÚß½ ¥æÞÉ, ¸ÞÁÚ ¥æÞÈÚÑÛ¤«Ú, CËÚ‡ÁÚ, VÚy®Ú~ Èæà¥ÚÅÛ¥Ú ¥æÞÈÚ, ¥æÞÈÚ}æVÚ×Úß ÈÚÁÚÐOæàQÈæß½ C GÄÇ @ÁÚØOÚmæoVÚØVÚà AVÚÉßÒ ®Úãeæ Ò‡ÞOÚÂÑÚß}Ú¡Èæ. B¥ÚÂM¥Ú BÈÚâVÚØVæ ¨ÚÁÚ½OÚmæoVÚ×æM¥Úà ÔæÑÚÁÚß …M¦¥æ. ¥æÞÈÚÁÚß …ÁÚßÈÚ ¦«Ú¥ÚM¥Úß OÚmæo ÒMVÛÁÚVæà×ÚßÙ}Ú¡¥æ. ÁÚMVæàÞÆ ÔÛP ÑÚMºÚ´ÃÉßÑÚß}Û¡Áæ. B¥Úನ್ನು OÚmæo®Úãeæ GM¥æÞ OÚÁæ¾ÚßÅÛVÚß}Ú¡¥æ.

C OÚmæoVÚ×Úನ್ನು ¬Â½Ò¥ÚÈÚÁÚ ÔæÑÚ¬M¥ÚÅæ VÚßÁÚß~ÑÚÅÛVÚß}Ú¡¥æ. ÔæVÚsæ OÚmæo, OÛÌÞ«Û¢Ú ËÛ«ÚºæàÞVÚÁÚ OÚmæo, ¥æÞÈÚÁÚß ÔæVÚsæ OÚmæo ÕÞVæ JM¥æàM¥Úß OÚmæoVÚà J†æๅ¹ÁÚ ÔæÑÚÁÚß }Ú×ÚOÚßÔÛPOæàMt¥æ. ÔÚÈÚÀOÚ ÔÛVÚà VèsÚ ÑÛÁÚÑÚ‡}Ú †ÛÃÔÚ½yÁÚß BÆÇ Ôæ_`«Ú ÑÚMSæÀ¾ÚßÆÇ @ÁÚØOÚmæo ¬Â½Ò¥Û§Áæ.

OÚmæo ¬Â½ÑÚÅÛ¥Ú @ÁÚØÈÚßÁÚVÚ×Ú ÑÚMSæÀ ÑÚßÈÚáÛÁÚß 50ÂM¥Ú 55ÁÚÏoÈæ. OÚmæo¿ßÄÇ¥Ú @ÁÚØÈÚßÁÚVÚ×Úß B¥ÚPQM}Ú Ôæ_`«Ú ÑÚMSæÀ¾ÚßÆÇÈæ. OæÄ @ÁÚØÈÚßÁÚ¥Ú @t¾ÚßÆÇ OÚÄßÇVÚM…VÚ×Úನ್ನು ¬Â½Ò ÈæßÞÅÛcÈÚ{ ÈÚáÛt ÔæM^Úß ÔÛOÚÅÛW¥æ. B¥æàM¥Úß ÑÚßÑÚfg}Ú ÈÚß«æ GM…M}æ OÛ{ÑÚß~¡¥æ.

OÚmæo ¬Â½ÑÚÅÛ¥Ú GÄÇ ÈÚßÁÚVÚØVÚà …ÃÔæà½Þ®Ú¥æÞËÚ ÈÚáÛsÚÅÛW¥æ. @ÁÚØÈÚßÁÚ¥Ú …ÃÔæà½Þ®Ú¥æÞËÚOæQ EÂVæ EÁæÞ ÑæÞÁÚß}Ú¡¥æ. @M¥Úß eÛ}æþÚß ÑÚMºÚ´ÃÈÚß, ÑÚsÚVÚÁÚ. ÈÚßÁÚVÚ×Úß C EÂ«Ú ÈÚßOÚQ×ÚM}æ †æ×æ¥Úß…M¦Èæ.

BÆÇ …ÔÚß}æÞOÚ @ÁÚØÈÚßÁÚVÚ×Úß, OÚmæoVÚ×Úß ¬ÁÛ½yÈÛW «ÚàÁÛÁÚß ÈÚÁÚÐVÚ×æÞ ÑÚM¦Èæ. C_«Ú ÈÚÁÚÐVÚ×ÚÄàÇ AVæàM¥Úß CVæàM¥Úß @ÁÚØÈÚßÁÚ, OÚmæoVÚ×Úß ¬ÁÛ½yÈÛVÚß~¡Èæ. ÈÚßÕ×æ¾ÚßÁÚÆÇ …Meæ}Ú«Ú ¬ÈÛÁÚzæVæ A¨Ú߬OÚ Èæç¥ÚÀËÛÑÚ¡ð¥ÚÆÇ ÉÉ¨Ú _P}æÓVÚ×Úß …M¦¥Ú§ÂM¥Ú d«ÚÁÚ «ÚM¸Oæ OÚÃÈæßÞy OÚtÈæß¾ÚáÛVÚß~¡¥æ. ÔÛVÛW @ÁÚØÈÚßÁÚVÚ×Ú ÑÚM}Û«Û»ÈÚ䦪 PÐÞ{Ò¥æ. A¥ÚÁæ CWÁÚßÈÚ BÆÇ«Ú JM¥Úß OÚmæo¾Úßನ್ನೂ ÔÛ×Úß ÈÚáÛtÄÇ. ¥æÞÈÚÁÚ ®ÚÄÇPQVÚ×Úß BÆÇ OÚßØ}ÚßOæà×ÚßÙÈÚâ¥ÚÂM¥Ú ËÚÃ¥æª, ¨Û½OÚ ºÛÈÚ«æVÚØM¥ÛW OÚmæoVÚ×Úß ÑÚMÁÚPÐÑÚÄ°noÈæ.

OÚßÈÚßmÛ …Ø ¦ÈÚW ÑæÞ}ÚßÈæ ¬ÁÛ½yOæQ ÈÚßßನ್ನ ÈÚßMVÚ×ÚàÁÚß OÛÁÚÈÛÁÚ Ôæ¥Û§Â ÔæVÚsæ ÈÚßàÄOÚÈæ ÔÛ¥ÚßÔæàÞW}Úß¡. ÔæVÚsæ¿ßM¥Ú ÉßÁÛg«éVæ @YÚ«Û̬ «Ú¦¾Úßನ್ನು †ÛÁég ÈÚßàÄOÚ ¥ÛlÅÛVÚß~¡}Úß¡. d}æVæ ^ÚOÚQt VÛtVÚ×Úà ÔæÞÁÚ×Ú ÑÚMSæÀ¾ÚßÆÇ C ÈÚáÛÁÚX¥ÚÆÇ ÑÚM^ÚÂÑÚß~¡¥Ú§ÈÚâ. AVÚ ®ÚþÚáÛ{OÚÁÚß, ^ÚOÚQtVÛtVÚ×ÚÆÇ ÑÚM^ÚÂÑÚßÈÚ d«ÚÁÚß C @ÁÚØÈÚßÁÚVÚ×Ú Oæ×ÚVæ AËÚþÚß ®Úsæ¾Úßß~¡¥Ú§ÁÚß. A ÑÚM¥ÚÁÚ¼¥ÚÆÇ BÆÇ«Ú @ËÚ‡}Ú¤OÚmæoVÚ×Úß ®Úâ´OÚQmæ ÈÚÑÚ~VÚäÔÚVÚ×ÚM}æ …×ÚOæ¾ÚáÛVÚß~¡¥Ú§ÈÚâ.

±æçOÚÑé eÛ~Væ ÑæÞÂÁÚßÈÚ AÄ, @ÁÚØ, @~¡, …ÑÚ ÈÚäOÚÐVÚ×Úನ್ನು fÞÈÚ ÈæçɨڴÀ}æ¾Úß }ÛyVÚ×Úß GM¥Úß OÚÁæ¾ÚßÅÛVÚß~¡Èæ. ÈÚÁÚÐÉtÞ @ÑÚMSÛÀ}Ú ®ÚPÐVÚ×Úß, DsÚ, ÔÛÈÚâÁÛ{, @ØÄß, ÄMVÚàÁÚ, K~, ÑÚÔÚÑÚîڦVÚ×Ú AËÚþÚß }ÛyVÚØÈÚâ. C ÈÚßÁÚVÚ×æÞ JM¥Úß D¥ÛÀ«Ú GM¥ÚÁæ }Ú®Û°VÚÅÛÁÚ¥Úß.

ÉeÛk¬VÚ×Úß C ÈÚßÁÚVÚ×Úನ್ನು ÔÚØÙ¾Úß ËÛ‡ÑÚOæàÞËÚVÚಳೆನ್ನು}Û¡Áæ. ÈÛ}ÛÈÚÁÚyÈÚನ್ನು ®ÚÂËÚߥڪVæàØÑÚßÈÚÆÇ @ËÚ‡}Ú¤ ÈÚßÁÚVÚ×Ú ®Û}Úà ÕÂ¥æನ್ನುÈÚâ¥Úß ®ÛÃ_Þ«Ú VÚÃM¢ÚVÚ×ÚÄàÇ DÅæÇÞRÈÛW¥æ. ÔæVÚsæ¾Úß }ÚßM†Û }æà«æ¥ÛsÚß~¡ÁÚßÈÚ BM}ÚÔÚ ÈÚßÁÚVÚ×Úß ËÚ}ÚÈÚáÛ«Ú¦M¥Ú @ÆÇ«Ú ËÛ‡ÑÚOæàÞËÚVÚ×ÛW OÛÁÚÀ¬ÁÚ‡ÕÑÚß~¡Èæ.

@M¥ÚÔÛVæ ÔæVÚsæ VÛÃÈÚß¥Ú d«ÚÁÚß ¦ÞÁÛ[¾ÚßßÏVÚ×Úß. BÆÇ«Ú d«ÚÂVæ @«ÛÁæàÞVÚÀÈÚã Ôæ^Û`W †ÛƒÑÚ¥Úß. C ®Úâ´lo VÛÃÈÚߥÚÆÇ d«ÚÑÚMSæÀ ÑÛOÚÏo¥Ú§ÁÚà JM¥æÞ JM¥Úß ®ÚãÁÚ|OÛÆOÚ AÑÚ°}æà BÄÇ. ÈÚßÕ×æ¾ÚßÁÚß ®ÚÃ~¦«Ú ÈÚßßMeÛ«æ @ÁÚØÈÚßÁÚOæQ ÑÚß}Úß¡ ÔÛOÚßÈÚâ¥ÚÂM¥Ú @ÂÉÄÇ¥ÚM}æ ÈÛÀ¾ÚáÛÈÚßÈÚã AW OÛÄß«æàÞÈÚâ, VÚMlß«æàÞÈÚâ, ÔÚä¥Ú¾ÚßOæQ ÑÚM…M¨Ú®Úlo OÛ¿ßÅæ ÑÚÈÚßÑæÀ¾Úßà Ôæ^Û`W OÛsÚ¥Úß.

«ÚM¸Oæ¿ßM¥ÛW JM¥Úß EÂ«Ú d«Ú}æ }ÚÈÚßVÚÂÉÄÇ¥ÚM}æ BÎæàoM¥Úß ÈÚßÁÚVÚ×Ú«Úß" ®æãÞÏÒOæàMsÚß …ÁÚß~¡ÁÚßÈÚâ¥Úß ®ÚÂÑÚÁÚ ÁÚOÚÐzæ, †æ×ÚÈÚ{VæVæ @¥Úß¹}Ú OæàsÚßVæ¾æßÞ ÑÚÂ.

@ËÚ‡}Ú¤ ®Úâ´ÁÛy
OÚÁÛÈÚØ fÅæÇVÚ×ÚÆÇ«Ú ®ÚÁÚM®ÚÁÛVÚ}Ú LÎÚƒ ÑÚÑÚÀVÚ×Ú …VæX ÈæçeÛk¬OÚ @¨Ú´À¾Úß«Ú «ÚsæÒ¥Ú sÛ+d¾ÚßOÚÁÚ ºÚMsÛ @ËÚ‡}Ú¤ ÈÚßÁÚVÚ×Ú …VæX ÉÈÚÂÑÚß}Ú¡, @ËÚ‡}Ú¤ ÈÚßÁÚOæQ PÞ ÑæàoÞ«é Ò°ÞÌÞÑé (®ÚÂÑÚÁÚ¥Ú ÈÚßàÅÛ¨ÛÁÚ eÛ~) GM¥Úß ÑÚÑÚÀËÛÑÚ¡ð¥ÚÆÇ OÚÁæ¾ÚßÅÛVÚß}Ú¡¥æ. HOæM¥ÚÁæ B¥æàM¥æÞ ÈÚßÁÚ 50 eÛ~¾Úß PÞl, ®ÚPÐ Èæà¥ÚÅÛ¥ÚÈÚâVÚ×Ú ÈÛÑÚOæQ @ÈÚOÛËÚ J¥ÚWÑÚß}Ú¡¥æ. ÉËÛÄÈÛW ÈÛÀ¯ÑÚßÈÚâ¥ÚÂM¥Ú AÈÚßÇd«ÚOÚÈÚನ್ನೂ Ôæ_`«Ú ®ÚÃÈÚáÛy¥ÚÆÇ C ÈÚßÁÚVÚ×Úß D}Û°¦ÑÚß}Ú¡Èæ. ®ÚÂÑÚÁÚOæQ @VÚ}ÚÀ ÑæÞÈæ¾Úßನ್ನು C ÈÚßÁÚVÚ×Úß J¥ÚWÑÚß}Ú¡Èæ ÔÛVÛW C ÈÚßÁÚVÚ×Úß @ÈÚßàÄÀÈÛ¥ÚÈÚâ Gನ್ನು}Û¡Áæ.

C ÈÚßÁÚVÚØM¥Ú ÈÚßßRÀÈÛW Væà«æÞ¾ÚáÛ, ÈÚÃy, d‡ÁÚ ¬ÈÛÁÚzæ, D¾Úßà}Ú, ಸ್ನಾ¾Úßß Ñæ×æ}Ú ¬ÈÛÁÚOÚ ÔÛVÚà fÞÁÚ|Pþæß¾Úßನ್ನು ÑÚߨÛÂÑÚßÈÚ LÎÚ¨Ú }Ú¾ÚáÛÂOæ «Úsæ¾Úßß~¡¥æ. A¾ÚßßÁæ‡Þ¥Ú¥Ú ®ÚÃOÛÁÚ OÚ±Ú ÈÚß}Úß¡ ¯}Ú¡¥Ú GÄÇ ÑÚÈÚßÑæÀVÚØVæ B¥Úß LÎÚƒ¾ÚáÛW¥æ. Ò¡ðÞÁæàÞVÚVÚØVæ D}Ú¡ÈÚß LÎÚ¨ÚÈÛW¥æ GM¥Úß @ÈÚÁÚß ÔæÞ×Úß}Û¡Áæ.

ಸೋಮವಾರ, ಸೆಪ್ಟೆಂಬರ್ 6, 2010

ಆಲದ ಮರ- ಭಾರತದ ‘ರಾಷ್ಟ್ರವೃಕ್ಷ’.


ಆಲದ ಮರ- ಭಾರತದ 'ರಾಷ್ಟ್ರವೃಕ್ಷ'.

ಹಿಂದಿಯಲ್ಲಿ 'ಬರಗದ್' ಎನ್ನುವರು.

ಇದರ ನೆರಳಲ್ಲಿ ಬನಿಯಾ(ಹಿಂದೂ ವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು banyan tree ಎಂದು ವಿದೇಶೀಯರು ಕರೆದರು.

ಸಂಸ್ಕೃತದಲ್ಲಿ ಇದನ್ನು 'ನ್ಯಗ್ರೋಧ' ಎಂದು ಕರೆಯುವರು. ಬಿಸಿಲು, ಮಳೆ ಕೆಳಗೆ

ಬೀಳುವುದರಿಂದ ತಡೆಯುವುದು ಎಂದು ಇದರ ಅರ್ಥ. ( ನ್ಯಕ್ ಅಧೋದೇಶೇ

ಸೂರ್ಯತಾಪ ವರ್ಷಾದಿ ರೋಧನಾತ್..)
ಆಲದ ಮರಕ್ಕೆ ಕೆಳಗೆ ಸೂಚಿಸಿದ ಗುಣಗಳಿರುವುದರಿಂದ ಅದು ಪುರುಷಪ್ರಾಯವಾದುದೆಂದು, ತ್ರಿಮೂರ್ತಿಸ್ವರೂಪಿಯೆಂದು ಪರಿಗಣಿಸಲ್ಪಟ್ಟಿದೆ :

೧. ಇದರ ಬೇರುಗಳಿಂದ ಕಷಾಯ ಮಾಡಿ ಕುಡಿದರೆ ಗರ್ಭ ನಿಲ್ಲುತ್ತದೆ. ಆದ್ದರಿಂದ - ಬೇರುಗಳು ಬ್ರಹ್ಮ / ಸೃಷ್ಟಿಶಕ್ತಿಯ ಪ್ರತೀಕ

೨. ಇದರ ಕಾಂಡ, ಕೊಂಬೆಗಳು ಔಷದೀಯ ಗುಣಗಳು ಹೊಂದಿದೆ. ಇದರಿಂದ ಮಾಡುವ ಹೋಮದ ಧೂಪ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ -ಕೊಂಬೆ, ಕಾಂಡ ವಿಷ್ಣು / ಸ್ಥಿತಿಶಕ್ತಿಯ ಪ್ರತೀಕ

೩. ಎಲೆ, ಚಿಗುರಿನ ಕಷಾಯ ಗರ್ಭ ಪಾತಕ್ಕೆ ಉಪಯೋಗಿಸಲಾಗುತ್ತದೆ. ಆದ್ದರಿಂದ - ಎಲೆಗಳು ರುದ್ರ / ಲಯಶಕ್ತಿಯ ಪ್ರತೀಕ
ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ "ನಾನು ವೃಕ್ಷಗಳಲ್ಲಿ ಅಶ್ವತ್ಥ, ಋಷಿಗಳಲ್ಲಿ ಕಶ್ಯಪ, ಮುಂತಾಗಿ ತನ್ನ ವಿಶ್ವರೂಪದರ್ಶನದಲ್ಲಿ ಹೇಳುತ್ತಾನೆ"
ಹೀಗೆ ಅರಳೀ ಮರ ಪುರುಷ ಸಂಕೇತವಾಗಿದೆ. ಅದೇ ರೀತಿ ಆಲದ ಮರ ಸ್ತ್ರೀ ಸಂಕೇತವಾಗಿದೆ (ಪ್ರಾಯಶಃ ಅದರ ಅಗಾಧ ಬೇರುಗಳ ಕಾರಣದಿಂದ). ಈ ಕಾರಣಗಳಿಂದ ಅರಳೀ ಮರ - ಆಲದ ಮರದ ವಿವಾಹದ ಆಚಾರವು ನಡೆಯುತ್ತವೆ

ಭಾನುವಾರ, ಸೆಪ್ಟೆಂಬರ್ 5, 2010

ಅರಳೀಮರ (ಅಶ್ವತ್ಥ, ಪಿಪ್ಪಲ..)

ನಮ್ಮ ದೇಶದ ಎಲ್ಲೆಡೆ ಬೆಳೆಯುವ ಮರ. ಇದರ ತುಂಬಾ ಎಲೆಗಳಿರುತ್ತವೆ. ಸ್ವಲ್ಪ ಗಾಳಿಗೂ ಅಲ್ಲಾಡುತ್ತಾ ಪರಪರ ಶಬ್ದ ಮಾಡುತ್ತಿರುವುದು. ಅದಕ್ಕೇ ಈ ಮರಕ್ಕೆ 'ಚಲಪತ್ರ' ಎಂಬ ಹೆಸರೂ ಇದೆ.
ಆಲದಂತೆ ಈ ಮರಕ್ಕೂ ಬೀಳಲುಗಳಿದ್ದರೂ ಗಾತ್ರದಲ್ಲಿ
ಸಣ್ಣ ಮತ್ತು ತೆಳುವಾಗಿರುವುದು.(पीपल कि दाडी :) )
ಈ ವೃಕ್ಷದ ಅಡಿಯಲ್ಲೇ ಕುಳಿತು ಅಖಂಡ ೪೯ ದಿನ ಧ್ಯಾನಿಸಿ,
ಜ್ಞಾನೋದಯವಾದ ಬುದ್ಧನಿಂದಾಗಿ ಇದಕ್ಕೆ 'ಬೋಧಿ ವೃಕ್ಷ' ಎನ್ನುವರು.
ಆನೆಗಳಿಗೆ ಇದರ ಎಲೆ ಪ್ರಿಯ ಖಾದ್ಯ ದ್ರವ್ಯ. ೪-೬ ದಿನ ಆನೆಗಳಿಗೆ ಇದರ ಎಲೆ ತಿನ್ನಲು ಸಿಗದಿದ್ದರೆ ಉನ್ಮತ್ತಗೊಳ್ಳುವುದಂತೆ. ಅದಕ್ಕೇ ಅಶ್ವತ್ಥಕ್ಕೆ

'ಗಜಾಶನ, ಗಜಭಕ್ಷ್ಯ' ಎಂಬ ಹೆಸರು ಬಂತು.
ಹಿಂದಿ ಹೆಸರು- ಪೀಪಲ್, ಪೀಪರ್
ಇಂಗ್ಲೀಷ್ನಲ್ಲಿ- peepul tree.
ಬಾಟನಿಕಲ್ ಹೆಸರು- Ficus religiosa. (Ficus rumphii ಇತ್ಯಾದಿ ಹಲವು ಪ್ರಭೇದಗಳಿವೆ)
ಅರಳಿಮರದಲ್ಲಿ ಭೂತಪ್ರೇತಗಳು ವಾಸಿಸುವುದಿಲ್ಲ ಎಂಬ ನಂಬಿಕೆ. ದೇವಸ್ಥಾನಗಳ ಸಮೀಪ ಅರಳೀಮರ,ಅಥವಾ ಅರಳೀಮರದ ಸಮೀಪ ದೇವಸ್ಥಾನಗಳು ಏಳುವುದು ಸಾಮಾನ್ಯ.
ಈ ಮರದ ಅಡಿಯಲ್ಲಿ ನಾಗನ ಕಲ್ಲುಗಳನಿಟ್ಟು ಪೂಜಿಸುವರು. ಮಕ್ಕಳಾಗದ ದಂಪತಿಗಳು ಅಶ್ವತ್ಥಕ್ಕೆ ಸುತ್ತು ಹಾಕಿ ನಾಗನ ಕಲ್ಲಿಗೆ ಪೂಜೆ ಸಲ್ಲಿಸಿದರೆ ಮಕ್ಕಳಾಗುವುದಂತೆ.
ಸಿನಿಮಾಗಳಲ್ಲಿ, ಅರಳೀ ಮರದ ಅಡಿಯ ಕಟ್ಟೆಯಲ್ಲಿ, ಹಳ್ಳಿಯ ಸಮಸ್ತ ಜನರು ಸೇರಿ, ಚರ್ಚೆ,ಜಗಳ,ನ್ಯಾಯತೀರ್ಮಾನ ಮಾಡುವುದನ್ನು ನೋಡಿಯೇ ಇರುತ್ತೀರಿ.

ಶನಿವಾರ, ಸೆಪ್ಟೆಂಬರ್ 4, 2010

ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ

ಬೇವಿನಷ್ಟು ಕಹಿಯಿಲ್ಲದಿದ್ದರೂ, ಬೇವಿನಂತೆ ವಿಶೇಷ ಗುಣವುಳ್ಳದ್ದರಿಂದ ಕರಿಬೇವಿಗೆ ಆ ಹೆಸರು ಬಂದಿದೆ. ಕರಿಬೇವು ಸಾಮಾನ್ಯವಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವ ಒಂದು ಬಗೆಯ ಸೊಪ್ಪು. ಸ್ವಾದ್ವಿಷ್ಟವಿಲ್ಲದಿದ್ದರೂ, ಸುವಾಸನೆ ಭರಿತವಾದ ಸಸ್ಯ. ಸಂಸ್ಕೃತದಲ್ಲಿ ಇದಕ್ಕೆ ಕಾಲಶಾಕ ಎನ್ನುತ್ತಾರೆ.

ಕಫ, ಪಿತ್ತ, ಜಠರದ ರೋಗ, ರಕ್ತದೊತ್ತಡ, ಮಧುಮೇಹ, ಉದರ ಸಂಬಂಧ ಸಮಸ್ಯೆ, ಆಮಶಂಕೆ, ಮಲಬದ್ಧತೆ, ಭೇದಿ ನಿವಾರಣೆಗೆ ಕರಿಬೇವು ಸಹಕಾರಿ. ಟಿಬಿ, ಜಾಂಡೀಸ್ ಹಾಗೂ ಸರ್ಜರಿ ನಂತರ ದೇಹದ ಆರೋಗ್ಯ ಸಮತೋಲನ ಕಾಪಾಡಲು ಕರಿಬೇವು ಸೇವನೆ ಒಳ್ಳೆಯದು.

ಉಪಯೋಗಗಳು:
* 1-2 ಟೀ ಚಮಚದಷ್ಟು ಎಲೆಯ ರಸವನ್ನು, 1 ಟೀ ಚಮಚ ನಿಂಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು.

* ಭೇದಿ, ಆಮಶಂಕೆ ನಿವಾರಣೆಗೆ ಎಳೆಯದಾದ ಎಲೆಗಳನ್ನು ಜೇನಿನೊಂದಿಗೆ ನೀಡಬಹುದು. ಅಥವಾ ಚೆನ್ನಾಗಿ ಅರೆದ ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಬೆರೆಸಿ ನೀಡಿದರೆ ಉಪಯುಕ್ತ.

* ಬೊಜ್ಜು ಕರಗಿಸಲು ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸೇವಿಸಿದರೆ ಒಳ್ಳೆಯದು.ಇದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದು.

* ಕುರು, ಗಾಯವಾದಾಗ ಕರಿಬೇವಿನ ಎಲೆಗಳನ್ನು ಅರೆದು ಸ್ವಲ್ಪ ಅರಿಶಿನದೊಂದಿಗೆ ಬೆರೆಸಿ ಅರೆದು ಹಚ್ಚಬಹುದು.

* ಕಾಮಾಲೆ ರೋಗವಿದ್ದಾಗ 10-12 ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅರೆದುಕೊಂಡು ಸುಮಾರು 60-100ಮಿ.ಲೀ ಎಳನೀರಿನೊಂದಿಗೆ ನೀಡಬಹುದು.

* ಸೊಳ್ಳೆ, ಇರುವೆ, ನೊಣ ಮುಂತಾದ ಕೀಟಗಳ ತೊಂದರೆ ತಪ್ಪಿಸಲು ಕರಿಬೇವಿನ ಸುವಾಸನೆ ಸಾಕು.

* ಕರಿಬೇವಿನ ಎಲೆಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುವ ಕಾರಣ, ಹಸಿ ಎಲೆಯನ್ನು ಅಗಿದು ತಿಂದರೆ ಒಳ್ಳೆಯದು.

ಆಯುರ್ವೇದ ಔಷಧಗಳಲ್ಲಿ ಕರಿಬೇವಿಗೆ ವಿಶೇಷ ಸ್ಥಾನವುಂಟು. ಕರಿಬೇವಿನ ಸೊಪ್ಪಿನ ಉಪಯೋಗಗಳು ಇನ್ನೂ ಅನೇಕ ಇದ್ದೇ ಇದೆ. ಓದುಗರು ತಮಗೆ ತಿಳಿದ ಸಲಹೆಗಳು ನಮಗೆ ತಿಳಿಸಬಹುದು

ಶುಕ್ರವಾರ, ಸೆಪ್ಟೆಂಬರ್ 3, 2010

ಗಜೇಂದ್ರಗಡ ಬೆಟ್ಟದ ಮೇಲೆ ನೀರಿನ ದುರ್ಬಳಕೆ

ಭೂಮಿ ಬೇಸಿಗೆಯ ಬಿಸಿಲಿಗೆ ಕಾದಿದೆ. ಮಳೆಯಿಲ್ಲದೇ ಭೂಮಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದರೆ ನಾವು ಮಾತ್ರ ನೀರನ್ನು ಬೇಕಾಬಿಟ್ಟಿ ಬಳಸಿ ನೀರಿನ ಅಮೂಲ್ಯವಾದ ಪಾತ್ರವನ್ನೇ ಬರಿದು ಮಾಡುವ ಸ್ಥಿತಿಯಲ್ಲಿದ್ದೇವೆ. ಹೀಗಿದ್ದರೂ ದಿನಬೆಳಗಾದರೆ ಸಾಕು ಗ್ರಾಮಗಳಲ್ಲಿ ನಮ್ಮ ಜನರು ಕುಡಿಯಲು ನೀರಿಲ್ಲದ ಕಾರಣಕ್ಕಾಗಿ 5 ರಿಂದ 10 ಕಿ.ಮೀ. ವರೆಗೆ ಹೋಗಿ ಸೈಕಲ್.ಬಂಡಿ.ಕೊನೆಗೆ ಕಾಲುದಾರಿಯಲ್ಲಿ ನೀರನ್ನು ತರುವಂಥಹದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.ಗ್ರಾಮಗಳಲ್ಲಿ ಬಾವಿ ಹಳ್ಳ-ಕೊಳ್ಳ,ಕಾಲುವೆ ಹೊಂಡಗಳು ನೀರಿಲ್ಲದೆಯೇ ಒಣಗುತ್ತಿವೆ.ಇನ್ನೊಂದೆಡೆ ಮಳೆಯಿಲ್ಲದೆ ಗಿಡ ಮರಗಳು ಒಣಗುತ್ತಿವೆ. ಕೃಷಿ ಭೂಮಿಯಲ್ಲಿ ನೀರಿಲ್ಲದೇ ವ್ಯವಸಾಯ ಮಾಡಲು ರೈತರಿಗೆ ಅತೀ ಕಷ್ಟದಾಯಕವಾಗಿದೆ.
ಇಷ್ಟೆಲ್ಲಾ ಆದರೂ ನೀರನ್ನು ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ. ಗಜೇಂದ್ರಗಡ ಬೆಟ್ಟದ ಮೇಲೆ ಅನೇಕ ಸಿಹಿನೀರಿನ ಹೊಂಡಗಳಿವೆ. ಅವುಗಳಲ್ಲಿ ಅಕ್ಕ ತಂಗಿ,ಆಕಳ ಮತ್ತು ಮಂಗನ ಹೊಂಡಗಳೆಂದು ಕರೆಯುತ್ತಾರೆ. ಈ ಹೊಂಡಗಳ ನೀರನ್ನು ಇಲ್ಲಿನ ಲಂಬಾಣಿ ಜನಾಂಗದವರು ಸಾರಾಯಿ ತಯಾರಿಸಲು ಉಪಯೋಗಿಸುತ್ತಾರೆ. ಹೊಂಡದ ದಡದ ಮೇಲೆ ಹೆಂಡವನ್ನು ತಯಾರಿಸುತ್ತಿದ್ದಾರೆ.ಸಾರಾಯಿ ತಯಾರಿಸಿದ ಅಶುದ್ಧ ನೀರು ಮತ್ತು ತಯಾರಿಸಿ ಬಿಟ್ಟುಹೊದ ಬೂದಿ,ಕಟ್ಟಿಗೆ ಪುಡಿ ಕೊಳೆತ ಇನ್ನಿತರ ವಸ್ತುಗಳ ಕಾಲುವೆ ಮುಖಾಂತರ ನೇರವಾಗಿ ಹರಿದು ಹೊಂಡವನ್ನು ಸೇರುವುದರಿಂದ ನೀರು ಪಾಚಿ ಕಟ್ಟಿದಂತೆ ಹಚ್ಚ ಹಸಿರಾಗಿ ಮಾರ್ಪಾಡುತವೆ.

ಇದರಿಂದ ನೀರು ವಾಸನೆ ಬರುತ್ತಿರುತ್ತದೆ.ಆದರೆ ಮೂಕ ಪ್ರಾಣಿಗಳು ದಾಹವನ್ನು ತೀರಿಸಿಕೊಳ್ಳಲು ಸಾರಾಯಿ ತ್ಯಾಜ್ಯದಿಂದ ಅಶುದ್ಧಗೊಂಡ ನೀರನ್ನು ಕುಡಿದು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿವೆ.ಅದೇ ಮಳೆಗಾಲದಲ್ಲಿ ಹೊಂಡಗಳು ತುಂಬಿ ಜಲಪಾತದಂತೆ ನೀರು ಬೆಟ್ಟದಿಂದ ಧುಮುಕುತ್ತಿರುವ ದೃಶ್ಯ ರಮಣೀಯ. ಹೊಂಡಗಳ ನೀರು ಮಲಿನವಾಗುವುದು ಹೀಗೇ ಮುಂದುವರೆದರೆ ಈಗ ಪ್ರಾಣಿಗಳಿಗೆ ತಗಲುವ ರೋಗಗಳು ಮುಂದೆ ಮನುಷ್ಯರಿಗೂ ತಗಲುವ ಯಾವ ಸಂದೇಹವಿಲ್ಲ.

ಗುರುವಾರ, ಸೆಪ್ಟೆಂಬರ್ 2, 2010

ಡಾಕ್ಟರ್ ಸಂಜೀವ ಕುಲಕರ್ಣಿಯವರ ‘ಸುಮನ ಸಂಗಮ’

ಡಾಕ್ಟರ್ ಸಂಜೀವ ಕುಲಕರ್ಣಿ ಧಾರವಾಡದಲ್ಲಿ ಪ್ರಸಿದ್ಧ ವೈದ್ಯರು. ಸ್ತ್ರೀ ರೋಗಗಳು ಹಾಗೂ ಪ್ರಸೂತಿ ಅವರ ಶುಶ್ರೂಷೆಯ ಸ್ಪೆಶಲೈಸೇಷನ್. ಸರಳ ಪರಿಸರ ಸ್ನೇಹಿ ಬದುಕು ರೂಢಿಸಿಕೊಂಡ ಅನುಕರಣೀಯ ವೈದ್ಯ ಅವರು.
ಧಾರವಾಡದಿಂದ ಅಳ್ನಾವರ ರಸ್ತೆಯ ಮೇಲೆ ದಡ್ದಿಕಮಲಾಪೂರ ಎಂಬ ಗ್ರಾಮವಿದೆ. ಧಾರವಾಡದಿಂದ ಅಂದಾಜು ೯ ಕಿಲೋ ಮೀಟರ್ ದೂರ. ಅಲ್ಲಿಂದ ೨ ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ಡಾಕ್ಟರ್ ಸಂಜೀವಣ್ಣ ಅವರ "ಸುಮನ ಸಂಗಮ". ಅದೊಂದು ಕಾಡು-ನಾಡು ಹಿತಮಿತವಾಗಿ ಮೇಳೈಸಿ ಹದಗೊಂಡ ನಾಡಿನ ಕಾಡು ತೋಟ! ೧೯೯೬ ರಲ್ಲಿ ಡಾಕ್ಟರ್ ಸಂಜೀವ ಕುಲಕರ್ಣಿಯವರು ಈ ೧೭ ಎಕರೆ ಭೂಮಿಯನ್ನು ಕೊಂಡುಕೊಂಡರು.
ಭೂಮಿಯನ್ನು ಕೃಷಿಗಾಗಿ ಆಯ್ದುಕೊಳ್ಳುವಾಗ ಅವರ ಮುಂದೆ ಆಯ್ಕೆಯ ಸ್ಪಷ್ಠವಾದ ಮಾನದಂಡಗಳಿದ್ದವು. ಧಾರವಾಡ ಬಿಟ್ಟು ಹೊಲ ದೂರವಿರಬೇಕು. ನೈಸರ್ಗಿಕವಾಗಿ ಮಳೆ ನೀರಿನಿಂದ ತೋಯ್ದು ಇಂಗುವಂತಹ ಗುಡ್ಡದ 'ಫುಟ್ ಹಿಲ್ಸ್' ನಲ್ಲಿ ಅರಳಬಲ್ಲ, ತುಸು ಇಳಿಜಾರಿರಬೇಕು. ಮಳೆ ನೀರು ಹರಿದು ಹೋಗದೇ ಗುಂಡಿಯಾಕಾರದಲ್ಲಿ ಸಣ್ಣ ಕೆರೆಗಳಂತೆ ಅಲ್ಲಲ್ಲಿ ಸಂಗ್ರಹಿಸಿ ಪುನ: ವ್ಯವಸಾಯಕ್ಕೆ ಅನುಕೂಲವಾಗುವಂತೆ ಮಾಡಲು ಸುಲಭವಾಗಬೇಕು. ಕಾಡಿನ ಪ್ರಾಣಿ-ಪಕ್ಷಿಗಳಿಗೂ ನೈಸರ್ಗಿಕ ಅರವಟ್ಟಿಗೆಗಳಾಗಿ ಅವು ಲಭ್ಯವಾಗಬೇಕು ಎಂದು 'ಸಂಕುಲಜೀವ' ಡಾಕ್ಟರ್ ಸಂಜೀವ ಕುಲಕರ್ಣಿಯವರು ಅಳೆದು-ತೂಗಿ ಈ ಭೂಮಿ ಖರೀದಿಸಿದರು.
ನಾವು ಒಂದು ಒಳ್ಳೆಯ ಕೆಲಸ ಮಾಡಲು ನಿರ್ಧರಿಸಿದರೆ ಇಡೀ ವಿಶ್ವದ ಧನಾತ್ಮಕ ಕಾಯಗಳು ಒಗ್ಗೂಡಿ ನಮ್ಮ ಸಹಾಯಕ್ಕೆ ನಿಂತು, ಪ್ರೇರೇಪಿಸುವಂತೆ.. ಸುದೈವವಶಾತ್ ಡಾಕ್ಟರ್ ಸಂಜೀವ ಕುಲಕರ್ಣಿಯವರು ಖರೀದಿಸಿದ ಹೊಲದ ಮಾಲೀಕ ದಶಕಗಳ ಕಾಲ ಅಲ್ಲಿ ಯಾವುದೇ ಕೃಷಿ ಮಾಡಿರಲಿಲ್ಲ. ಹಾಗಾಗಿ ಅದು ವಿಷ ರಹಿತ ಅನ್ನದ ಬಟ್ಟಲಾಗಿತ್ತು! ಯಾವುದೇ ರಾಸಾಯನಿಕಗಳು, ಕೀಟನಾಶಕಗಳು ಒಟ್ಟಾರೆ ಪರಿಸರ ಅಸ್ನೇಹಿ ಒಳಸುರಿಗಳನ್ನು ಸುರಿದು ಲಾಭಕ್ಕಾಗಿ ಕೃಷಿ ಮಾಡುವುದಿಲ್ಲ ಎಂದು ಅವರು ನಿರ್ಧರಿಸಿದ್ದರು. ಮಸನೊಬು ಫುಕುವೋಕಾ ಹೇಳುವಂತೆ "ವಿಜ್ಞಾನ ತನ್ನ ವೈಜ್ಞಾನಿಕ ಜ್ಞಾನದ ಮೂಲಕ ಅರಿತಿರುವುದು ಮೃತ ಪ್ರಕೃತಿಯನ್ನಷ್ಟೇ; ಆತ್ಮವಿಲ್ಲದ ದೇಹದಲ್ಲಿರುವ ಭೂತವನ್ನಷ್ಟೇ.."! ಲಭ್ಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕ್ರೊಢೀಕರಿಸಿಕೊಂಡು ಬಳಸುವುದು, ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಬೆಳೆ ವೈವಿಧ್ಯತೆಯ ಮೂಲಕ ಫಲವತ್ತತೆ ಕಾಯ್ದುಕೊಳ್ಳುವುದು. ನೆಲಮೂಲ ಜ್ಞಾನವನ್ನು ಆಕರಿಸಿಕೊಂಡು ಸಹಜ ಕೃಷಿ ಮಾಡುವುದು ಡಾಕ್ಟರ್ ನಿರ್ಧಾರವಾಗಿತ್ತು.

ಫುಕುವೋಕಾ ಹೇಳುತ್ತಾರೆ ಕೃಷಿಯ ಅಂತಿಮ ಗುರಿ ಬೆಳೆ ಬೆಳೆಯುವುದಲ್ಲ. ಬದಲು ಮನುಷ್ಯನ ಬೆಳವಣಿಗೆ. ನನ್ನ ಕೃಷಿ ಎಂದರೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಜ್ಜೆಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮದಿಯನ್ನೂ ಪಡೆದುಕೊಳ್ಳುವುದು." ಡಾಕ್ಟರ್ ಸಂಜೀವ ಕುಲಕರ್ಣಿಯವರು ಕೃಷಿಯನ್ನು ಹಾಗೆ ಅರ್ಥ ಮಾಡಿಕೊಳ್ಳಲು ಅಧ್ಯಯನ ಮಾಡಿದ್ದಾರೆ. 'ಸುಮನ ಸಂಗಮ'ದಲ್ಲಿ ಒಟ್ಟು ಒಂಭತ್ತು ಎಕರೆ ತೋಟಕ್ಕೆ ಹಾಗೂ ಕಾಡಿನ ಮರಗಳಿಗೆ ಮೀಸಲಿಟ್ಟಿದ್ದಾರೆ. ಇನ್ನು ಐದು ಎಕರೆ ಭೂಮಿಯಲ್ಲಿ ಹುರುಳಿ, ರಾಗಿ, ಭತ್ತ, ನೆಲಗಡಲೆ ಹಾಗೂ ಸೋಯಾಬೀನ್ ಬೆಳೆಯುತ್ತಿದ್ದಾರೆ. ಕೆರೆ-ಕೃಷಿ ಹೊಂಡಗಳಿಗಾಗಿ ಎರಡು ಎಕರೆ ಮೀಸಲು. ಈ ಹೊಂಡಗಳೆ ತೋಟದ ಅಂತರ್ಜಲ ಹೆಚ್ಚಿಸುವ ಬ್ಯಾಂಕರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆಗಾಲದಲ್ಲಿ ಉಳಿತಾಯ ಖಾತೆಗಳಿಗೆ ಜಮೆ..ಬೇಸಿಗೆಯಲ್ಲಿ ಅವಶ್ಯಕತೆಗೆ ತಕ್ಕಷ್ಟು ಸೇಫ್ ಡೆಪಾಸಿಟ್ ನಿಂದ ಹಿಂಪಡೆದು ಹಿತ-ಮಿತವಾಗಿ ಬಳಕೆ. ಒಟ್ಟು ೧೭ ಎಕರೆಯಲ್ಲಿ ಮಿಕ್ಕಿದ ೧ ಎಕರೆ ಅವರು ತೋಟದಲ್ಲಿ ಸಾಕಿರುವ ಎರಡು ಎತ್ತು, ಎರಡು ಎಮ್ಮೆ, ಎರಡು ಆಕಳುಗಳಿಗೆ ಮೇಯಲು ಹಸಿರು ಹುಲ್ಲು ಒದಗಿಸುತ್ತದೆ.

ಕಳೆದ ನಾಲ್ಕಾರು ವರ್ಷಗಳ ಕೆಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಚಾಟಿ ಬೀಸಿದ್ದ ಬರಗಾಲ ಸಂಜೀವಣ್ಣ ಅವರಿಗೂ ಬಿಸಿ ತಾಗಿಸದೇ ಬಿಟ್ಟಿಲ್ಲ. ತೋಟದ ಯಾವ ಹೊಂಡದಲ್ಲಿಯೂ ಹನಿ ನೀರಿರದೆ, ತಾತ್ವಾರಕ್ಕೆ ಈಡಾಗಿ ಡಾಕ್ಟರ್ ಸಂಜೀವ ಕುಲಕರ್ಣಿಯವರು ತಮ್ಮ ಆಶಯಕ್ಕೆ ವಿರುದ್ಧವಾಗಿ ಕೊಳವೆ ಬಾವಿ ಕೊರೆಸಿದ್ದಿದೆ. ಆದರೆ ನಂತರದ ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಡಾಕ್ಟರ್ ಸಂಜೀವ ಕುಲಕರ್ಣಿಯವರು ಬಹಳ ಉಮ್ಮೇದಿಯಿಂದ ಹೇಳುತ್ತಾರೆ.."ನಮ್ಮ ತ್ವಾಟಕ್ಕ ಮೂರು ಕಡೆ ಇಳಿಜಾರು ಅದ. ಯಾವ ಭಾಗದೊಳಗ ಮಳೆಯಾದರೂ ನೀರು ಹರದು 'ಎಪಿ ಸೆಂಟರ್' ಬೋಧಿ ಕೆರೆಯತನಕ ಸಾಗಿ ಬಂದು ಕೃಷಿ ಹೊಂಡ ತುಳುಕುವಂಗ ಮಾಡ್ತದ. ಒಂದು ಹನಿ ನೀರೂ ವ್ಯರ್ಥ ಆಗೋದಿಲ್ಲ. ನಮ್ಮ 'ಸಂಪಿಗೆ ಹೊಂಡ'ದ ಸುತ್ತಳತಿ ೧೦ x ೨೦ x ೪ ಇದ್ದು, ಮಳೆ ಬಂದಾಗ ಮೊದಲ ಅದು ತುಂಬತೈತಿ. ಅದು ತುಂಬಿ ಓವರ್ ಫ್ಲೋ ಆದಮ್ಯಾಲೆ ಕೆಳಗಿನ 'ಮೈನಾ ಹೊಂಡ'ದೊಳಗ ಸಂಗ್ರಹಗೊಳ್ತದ. ಅದರ ಅಳತಿ ಸುಮಾರು ೧೫ x ೫ x ೨. ಮೂರನೇಯ ಹೊಂಡದ ಹೆಸರು 'ರಘು ತೀರ್ಥ; ಅದು ೧೦ x ೧೦ x ೪ ರಷ್ಟು ಜಾಗೆಯೊಳಗ ಹೆಚ್ಚುವರಿಯಾಗಿ ಹರಿದು ಬರೋ ನೀರನ್ನು ತನ್ನ ಒಡಲೊಳಗ ತುಂಬಿಸಿಕೊಳ್ತದ. ನಂತರ ಮತ್ತೊಂದು ಸಣ್ಣ ಕೃಷಿ ಹೊಂಡ ಅದ 'ಕವಳಿ ಕೊಳ'. ಇವೆಲ್ಲ ತುಂಬಿ ತುಳುಕಿದ ಮ್ಯಾಲೆ ನೀರು ಹರಿದುಕೊಂಡು ಬರೋದು 'ಬೋಧಿ ಕೆರೆ'ಗೆ. ಅದು ಭಾಳ ದೊಡ್ದ ಕೆರಿ. ಕೆರೆಯ ಮಧ್ಯದೊಳಗ ಬೋಧಿ ಗಿಡ ಇರೋದರಿಂದ ಅದಕ್ಕ ಆ ಹೆಸರು ಇಟ್ಟೇವಿ" ಡಾಕ್ಟರ್ ಸಂಜೀವ ಕುಲಕರ್ಣಿಯವರ ನೀರ ಕಳಕಳಿ ಅವರು ಸಾಧಿಸಿರುವ ನೀರ ನೆಮ್ಮದಿ ನನಗೆ ವಿಶ್ವ ವಿದ್ಯಾಲಯದ ಪಠ್ಯವಾಗಬಹುದು ಅನ್ನಿಸಿತು.

ಡಾಕ್ಟರ್ ಸಂಜೀವ ಕುಲಕರ್ಣಿಯವರು ಸುಮನ ಸಂಗಮ ತೋಟದ ಸುತ್ತ 'ಜೀವಂತ ಬೇಲಿ' ನೆಟ್ಟಿದ್ದಾರೆ. ಅರ್ಥಾತ್ ವಿದ್ಯುತ್ ಬೇಲಿ ಅಲ್ಲ. ನೈಸರ್ಗಿಕವಾಗಿ ಬೆಳೆದಿದ್ದ ಕಾಡಿನ ಗಿಡಗಳನ್ನು ಕಡಿದು ಸಾಗಿಸದೇ ಹಾಗೆಯೇ ಇಟ್ಟುಕೊಂಡು, ಮತ್ತಷ್ಟು ಕಾಡು ಮರಗಳನ್ನು ಅವರು ನೆಟ್ಟಿದ್ದಾರೆ. ಸಾವಿರಕ್ಕೂ ಮಿಕ್ಕಿದ ಸಾಗವಾನಿ, ಹೊಂಗೆ ಮರಗಳು, ಅಕೇಷಿಯಾ, ಬೇವು, ಆಲ, ಅತ್ತಿ ಬಳಸಲು ಫಲ ಕೊಡುವ ತೆಂಗಿನ ಮರಗಳನ್ನು ಬೆಳೆಸಿ ತೋಟಕ್ಕೆ ಕೋಟೆ ಸದೃಷ ಆವರಣ ಅವರು ಸೃಷ್ಟಿಸಿದ್ದಾರೆ. ನೂರು ಗಿಡಗಳಷ್ಟು ಹಲಸು, ಮಾವು, ಸೀತಾಫ್ಲಲ, ರಾಮ ಫಲ, ಮರಸೇಬು, ಪಪ್ಪಾಯಾ, ಅಂಜೂರು, ಅನಾನಸು, ಸಿಂಗಾಪೂರ ಚೆರ್ರಿ, ಗೇರು ಹಣ್ಣಿನ ಮರ, ವಿವಿಧ ಜಾತಿಯ ನಿಂಬೆಯ ಗಿಡಗಳು ಇಲ್ಲಿವೆ. ಈಗಾಗಲೇ ಅವು ಫಲ ನೀಡಲು ಆರಂಭಿಸಿದ್ದು ಪಕ್ಷಿಗಳು ತಮ್ಮ ಪಾಲನ್ನು ಆಗಲೇ ಹೊತ್ತೊಯ್ದಿದ್ದರೆ, ಡಾಕ್ಟರ್ ಸಂಜೀವ ಕುಲಕರ್ಣಿಯವರು ಆಪ್ತರಿಗೂ ಹಂಚಿ ಖುಷಿ ಪಟ್ಟಿದ್ದಾರೆ.

'ಸುಮನ ಸಂಗಮ'ದಲ್ಲಿ ಪುಷ್ಪೋದ್ಯಾನವೂ ಇದೆ. ಮಲ್ಲಿಗೆ, ಸಂಪಿಗೆ, ಕಾಕಡ, ಗುಲಾಬಿ, ನಾಗಲಿಂಗ ಪುಷ್ಪ, ದೇವಕಣಗಿಲೆ, ಗೌರಿ ಹೂವು, ಅಶೋಕ ಎಲ್ಲವೂ ಮನ ತಣಿಸುತ್ತವೆ. ಕೈ ತುಂಬ ಹಣ ಸಂಪಾದನೆ ಇರುವ, ಮೈತುಂಬ ಟೆನ್ಷನ್ ಹೊತ್ತಿರುವ ಡಾಕ್ಟರ್ ಸಂಜೀವಣ್ಣ ಅವರಿಗೆ ಈ ಕೆಲಸ ಬೇಕಿತ್ತೆ? ಅವರೇ ಹೇಳುತ್ತಾರೆ.."ಕೃಷಿಯಲ್ಲಿ ಗಿಡ ಬೆಳೆಸಿದ ಖುಷಿ, ನೀರು ಇಂಗಿಸಿದ ಹಿತ, ಪಕ್ಷಿ-ಪ್ರಾಣಿಗಳಿಗೆ ಸಾಂದರ್ಭಿಕವಾಗಿ ಆಹಾರವಿತ್ತು ಪೋಷಿಸಿದ ಧನ್ಯತೆ ಇನ್ಯಾವ ವೃತ್ತಿಯಲ್ಲಿ ಇದ್ದೀತೋ?..ಹಾಗಾಗಿ ಹವ್ಯಾಸಕ್ಕಾಗಿ ಈ ಕೆಲಸ; ಆದರೆ ಅಷ್ಟೇ ಗಂಭೀರವಾಗಿ".ನೀವೂ ಒಮ್ಮೆ 'ಸುಮನ ಸಂಗಮ'ಕ್ಕೆ ಭೇಟಿ ನೀಡಿ..

ವಿಳಾಸ: ಡಾ. ಸಂಜೀವ ಕುಲಕರ್ಣಿ, ಬಾಲಬಳಗ ಆವರಣ, ಮಹಿಷಿ ರಸ್ತೆ, ಮಾಳಮಡ್ಡಿ ಧಾರವಾಡ, ೫೮೦ ೦೦೭. ದೂರವಾಣಿ: (೦೮೩೬) ೨೭೪೩೧೦೦.

ಬುಧವಾರ, ಸೆಪ್ಟೆಂಬರ್ 1, 2010

ಇಡೀಗ್ರಾಮವೇ ರಾಸಾಯನಿಕದಂದ ಸಾವಯವದೆಡೆಗೆ

ಗ್ರಾಮದಲ್ಲಿ ಒಬ್ಬಿಬ್ಬರು ಸಾವಯವ ಬೇಸಾಯ ಮಾಡುವುದು ರೂಢಿ, ಅದರಲ್ಲಿಯೂ ತೋಟವಿರುವವರೇ ಹೆಚ್ಚು. ಆದರೆ ಇಡೀ ಗ್ರಾಮವೇ ಒಗ್ಗೂಡಿ ಆ ಚಿಂತನೆ ಮಾಡುತ್ತಾ ತೋಟದ ಬೆಳೆ ಮಾತ್ರವಲ್ಲದೆ ಆಹಾರ ಬೆಳೆಗಳಲ್ಲಿಯೂ ಸಾವಯವದತ್ತ ಹೊರಳಿರುವುದು ಅಪರೂಪ. ತುಮಕೂರು ಜಿಲ್ಲೆಯಲ್ಲಿನ ಹಳ್ಳಿಯೊಂದರ ಅನುಭವ ಇದು.

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಚಿಕ್ಕಗೊರಘಟ್ಟ ೯೦ ಕುಟುಂಬಗಳ ಗ್ರಾಮ. ಊರಿನ ಹಿರಿ ತಲೆಗಳ ಪ್ರಕಾರ 'ಗೊರಘಟ್ಟ' ಎಂದರೆ ಕಠಿಣವಾದ ಪ್ರದೇಶ ಅಥವಾ ಗಡುಸು ಭೂಮಿ. ಹಿರಿಯರ ನೆನಪಿನಂತೆ ಈ ಗ್ರಾಮಕ್ಕೆ ಮೊಟ್ಟಮೊದಲು ೧೯೬೮ ರಲ್ಲಿ 'ಸೂಪರ್' ಹೆಸರಿನ ರಸಾಯನಿಕ ಗೊಬ್ಬರ ಬಂದಿತು. ಆಗ ಚೀಲವೊಂದಕ್ಕೆ ಕೇವಲ ೨೫ ರುಪಾಯಿ. ನಂತರ ಕಾಂಪ್ಲೆಕ್ಸ್ ಗೊಬ್ಬರ, ಒಂದೆರಡು ವರ್ಷಗಳ ನಂತರ ಜಯ ಮತ್ತು ಐ.ಆರ್.೮ ಸುಧಾರಿತ ಭತ್ತದ ತಳಿಗಳ ಪ್ರವೇಶವಾಯಿತು. ಅದರ ಹಿಂದೆಯೇ ಮೆಟಾಸಿಡ್, ರೋಗರ್ ಔಷಧಿಗಳು ಬಂದವು. ಇದು ಗ್ರಾಮದ ರಾಸಾಯನಿಕ ಕೃಷಿ ಇತಿಹಾಸ.
೨೦೦೭ ರಿಂದ ಗ್ರಾಮದಲ್ಲಿ ಸಾವಯವ ಕೃಷಿಗೆ ಚಾಲನೆ ದೊರೆಯಿತು. ರಾಸಾಯನಿಕ ಕೃಷಿಯಲ್ಲಿ ನಷ್ಟ ಹೊಂದುತ್ತಾ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದ ಗ್ರಾಮಸ್ಥರಿಗೆ ಇದು ವರದಾನದಂತೆ ಕಂಡು ಬಂದಿತು. ಸಾವಯವ ಕೃಷಿಯಲ್ಲಿ ಪ್ರೀತಿಯುಳ್ಳವರು ಸೇರಿ ಶ್ರೀರಂಗ ಸಾವಯವ ಕೃಷಿ ಸಮಿತಿಯನ್ನು ರಚಿಸಿಕೊಂಡಿದ್ದು, ಗ್ರಾಮದ ಎಲ್ಲರೂ ಸಾವಯವ ಕೃಷಿ ಮಾಡಲು ಉತ್ತೇಜನ ನೀಡುತ್ತಿದೆ. ಅಲ್ಪ ಕಾಲದಲ್ಲಿಯೇ ಯಶಸ್ವಿಯೂ ಆಗಿದೆ.

ಮನೋಭಾವದಲ್ಲಿ ಬದಲಾವಣೆ:
ಗ್ರಾಮದ ಜನರ ಜೊತೆ ಒಡನಾಡಿದಾಗ ಕಂಡುಬಂದ ಪ್ರಮುಖ ಅಂಶ ಅವರ ಮನೋಭಾವದಲ್ಲಾಗಿರುವ ಬದಲಾವಣೆ. ಯಾವುದೋ ಒಂದು ಯೋಜನೆ ಬಂದಿದೆ, ಅದು ಇರುವಷ್ಟು ದಿನ ಮಾಡೋಣ ಎಂಬ ಉದಾಸೀನ ಯಾರಲ್ಲೂ ಕಂಡು ಬರುವುದಿಲ್ಲ. ಸಾವಯವ ಕೃಷಿ ವಿಧಾನಗಳನ್ನು ಕಾಟಾಚಾರಕ್ಕೆ ಮಾಡದೇ ಆತ್ಮಪೂರ್ವಕವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ;
ಸಾವಯವ ಕೃಷಿಯಲ್ಲಿ ಇಳುವರಿ ಕಡಿಮೆ ಎನ್ನುವುದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಅದೊಂದು ನಂಬಿಕೆಯಾಗಿಯೇ ಬೆಳೆದಿದೆ. ಆದರೆ ಚಿಕ್ಕಗೊರಾಘಟ್ಟದ ಹಲವಾರು ರೈತರು ಸಾವಯವದಲ್ಲೂ ಉತ್ತಮ ಇಳುವರಿ ಪಡೆಯಬಹುದೆಂದು ಸಾಧಿಸಿ ತೋರಿಸಿದ್ದಾರೆ. ಗ್ರಾಮದ ಚನ್ನಬಸವಯ್ಯ ಮುಂಚೆಯಿಂದಲೂ ಅರ್ಧ ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಹಲವಾರು ವರ್ಷಗಳಿಂದ ರಸಗೊಬ್ಬರ ಬಳಸುವುದು ರೂಢಿ. ಆರಂಭದಲ್ಲಿ ಚೆನ್ನಾಗಿ ಇಳುವರಿ ಬರುತ್ತಿದ್ದುದು ೨೦೦೫ ಮತ್ತು ೨೦೦೬ ರಲ್ಲಿ ಅರ್ಧ ಎಕರೆಗೆ ೪ ರಿಂದ ೫ ಚೀಲ ರಸಗೊಬ್ಬರ ಬಳಸಿದರೂ ಬೆಳೆ ರೋಗಕ್ಕೆ ತುತ್ತಾಗಿ ಸಂಪೂರ್ಣ ಫೇಲಾಗುತ್ತದೆ.
೨೦೦೭ ರಲ್ಲಿ ಪೂರ್ತಿ ಸಾವಯವ ವಿಧಾನದಲ್ಲೇ ಭತ್ತ ಬೆಳೆಯುತ್ತಾರೆ. ಪೋಷಕಾಂಶವಾಗಿ ಅವರು ಕೊಡುವುದು ೪ ಡ್ರಂ ಜೀವಾಮೃತ ಮಾತ್ರ. ಆಶ್ಚರ್ಯವೆಂಬಂತೆ ಸಾವಯವದಲ್ಲಿ ಉತ್ತಮ ಬೆಳೆ ಬಂದು ಅರ್ಧ ಎಕರೆಗೆ ೧೦ ಚೀಲ (೭೦ ಕೆ.ಜಿ. ತೂಕ) ಇಳುವರಿ ಬರುತ್ತದೆ. ಅಕ್ಕಿಯ ತೂಕವೂ ಸಹ ಉತ್ತಮವಾಗಿತ್ತು ಎನ್ನುವ ಚನ್ನಬಸವಯ್ಯ "ನಾನಿನ್ಯಾವತ್ತೂ ಸೀಮೆ ಗೊಬ್ರದ ಸುದ್ದಿಗೇ ಹೋಗಲ್ಲ" ಎನ್ನುತ್ತಾರೆ.
ಮನೋಭಾವದಲ್ಲಾಗಿರುವ ಬದಲಾವಣೆಗೆ ಮತ್ತೊಂದು ಉದಾಹರಣೆ ಎಂದರೆ ಪ್ಲಾಸ್ಟಿಕ್ ಹಾಗೂ ಕೃಷಿ ತ್ಯಾಜ್ಯಗಳದ್ದು. ಯೋಜನೆಗೆ ಮುಂಚೆ ರೈತರು ತಮ್ಮ-ತಮ್ಮ ಹೊಲಗಳಲ್ಲಿನ ಕಸ-ಕಡ್ಡಿ, ಗರಿ, ಸೋಗೆ ಮುಂತಾದವನ್ನು ಗುಡ್ಡೆ ಹಾಕಿ ಸುಡುತ್ತಿದ್ದರು. ಆದರೆ ಈಗ ಗೊಬ್ಬರದ ಗುಂಡಿಗೆ ಹಾಕುತ್ತಾರೆ ಮತ್ತು ತೋಟದಲ್ಲಿ ಮುಚ್ಚಿಗೆಯಾಗಿ ಬಳಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಮಲ್ಲಿಕಯ್ಯ ಹೇಳುತ್ತಾರೆ, "ಪ್ಲಾಸ್ಟಿಕ್ ಕವರ್ರುಗಳು ಕೊಳೀತಾವೆ ಅಂದ್ಕೊಂಡು ತೋಟಕ್ಕೆ ಹಾಕ್ತಾ ಇದ್ವಿ, ತರಬೇತಿ ಕೊಟ್ಟಮೇಲೇನೆ ನಮಗೆ ಅದು ಕೊಳೆಯುವುದಿಲ್ಲ ಅಂತ ಗೊತ್ತಾಗಿ ಎಲ್ಲಾ ಎತ್ತಿ ಬಿಸಾಕಿದ್ವಿ, ಅದೂ ಅಲ್ದೆ ನಮ್ಮ ಹೊಲದ ಬದುಗಳಲ್ಲಿದ್ದ ಗ್ಲಿರಿಸೀಡಿಯಾ ಗಿಡಗಳನ್ನು ಕಡಿದು ಎಸೆಯುತ್ತಿದ್ದೆವು, ಈಗ ಕಡಿಯುವುದು ಬಿಟ್ಟಿದ್ದೇವೆ". ಗ್ರಾಮದ ಬಹುತೇಕ ರೈತರ ಅಭಿಪ್ರಾಯವೂ ಸಹ ಇದೇ ಆಗಿದೆ.

ಎಲ್ಲೆಲ್ಲೂ ಎರೆಗೊಬ್ಬರ
೪೫ಕ್ಕೂ ಅಧಿಕ ಮನೆಗಳವರು ಎರೆಹುಳು ತೊಟ್ಟಿ ಕಟ್ಟಿಕೊಂಡಿದ್ದಾರೆ. ಶಿವಣ್ಣ, ಭಾಗ್ಯಮ್ಮ, ಮಲ್ಲಿಕಣ್ಣ, ಬಸವರಾಜು, ಪುರುಷೋತ್ತಮ್, ಗಿರಿಜಮ್ಮ, ಚನ್ನಬಸವಯ್ಯ ಮುಂತಾದ ಹಲವಾರು ರೈತರು ಕ್ವಿಂಟಾಲ್‌ಗಟ್ಟಲೆ ಗೊಬ್ಬರ ತೆಗೆದು ಬಳಸುತ್ತಿದ್ದಾರೆ. ಅದರಲ್ಲಿ ತುಂಬಾ ಯಶಸ್ವಿಯಾದ ಇಬ್ಬರು ರೈತರೆಂದರೆ ಆರ್,ಶಿವಲಿಂಗಯ್ಯ ಮತ್ತು ಮಲ್ಲಿಕಯ್ಯ
ಆರ್.ಶಿವಲಿಂಗಯ್ಯನಿಗೆ ೮ ಎಕರೆ ಜಮೀನಿದೆ. ಅಲ್ಲಿರುವ ಪುಟ್ಟ ಮನೆಯ ಪಕ್ಕದಲ್ಲೇ ಎರೆಹುಳು ತೊಟ್ಟಿ, ಅಜೋಲಾ ಗುಂಡಿ, ಕಾಂಪೋಸ್ಟ್ ತೊಟ್ಟಿ ಹಾಗೂ ಕೃಷಿ ಹೊಂಡ ಮಾಡಿಕೊಂಡಿದ್ದಾರೆ. ಸದಾ ಹೊಲದಲ್ಲಿಯೇ ಇದ್ದು ಬೇಸಾಯ ಮಾಡುವ ಇವರು ತರಕಾರಿ ಮತ್ತು ಬಾಳೆ ಬೆಳೆಯುವುದರಲ್ಲಿ ನಿಸ್ಸೀಮರು. ಬಾಳೆ ತೋಟದಲ್ಲಿ ಪೋಷಕಾಂಶ ನಿರ್ವಹಿಸಲು ಹುರುಳಿ ಮತ್ತು ಅಲಸಂದೆ ಚೆಲ್ಲಿದ್ದು ಅದು ಇಡೀ ತೋಟವನ್ನು ನೆಲ ಕಾಣದಂತೆ ಮುಚ್ಚಿ ಬೆಳೆದಿದೆ. ಇದರಿಂದ ಬಾಳೆಯ ಫಸಲೂ ಸಹ ಉತ್ತಮವಾಗಿದ್ದು ಅಧಿಕ ಗಾತ್ರದ ಗೊನೆಗಳು ಸಿಗುತ್ತಿವೆ ಎನ್ನುತ್ತಾರೆ ಶಿವಲಿಂಗಯ್ಯ.
ಸಂಪೂರ್ಣ ಸಾವಯವದಲ್ಲೇ ರಾಗಿ ಬೆಳೆದು ಯಶಸ್ವಿಯಾಗಿರುವುದು ಇವರ ಮತ್ತೊಂದು ಸಾಧನೆ. ಅರ್ಧ ಎಕರೆಯಲ್ಲಿ ಕೇವಲ ಜೀವಾಮೃತ ಮತ್ತು ಎರೆಹುಳು ಗೊಬ್ಬರ ಬಳಸಿ ರಾಗಿ ಬೆಳೆದಿದ್ದು ಉತ್ಕೃಷ್ಟ ಇಳುವರಿ ಬಂದಿದೆ. ರಾಗಿಗೆ ೩ ಸಲ ದ್ರವರೂಪದ ಜೀವಾಮೃತ ಕೊಟ್ಟಿದ್ದಾರೆ. ಆರಂಭದಲ್ಲಿ ಎರೆಹುಳು ಸಾಕಲು ಮುಂದಾದಾಗ ಎಲ್ಲರೂ ಆಡಿಕೊಂಡಿದ್ದರಂತೆ, ಆದರೆ ಈಗ ಅವರು ತಮ್ಮ ೧೨ ಅಡಿ ಉದ್ದ ಮತ್ತು ೬ ಅಡಿ ಅಗಲದ ಎರೆ ಹುಳು ಗುಂಡಿಯಲ್ಲಿ ೧೫ ಕ್ವಿಂಟಾಲ್‌ಗೂ ಅಧಿಕ ಗೊಬ್ಬರ ತೆಗೆದಿದ್ದು ಅದರಲ್ಲಿ ೧೦ ಕ್ವಿಂಟಾಲ್ ನ್ನು ತಮ್ಮ ತೆಂಗು ಮತ್ತು ಅಡಿಕೆ ಮರಗಳಿಗೆ ಹಾಕಿದ್ದಾರೆ.

ಗಂಜಲಕ್ಕೆ ಕಾಯಕಲ್ಪ!

"ನಮ್ ತಂದೆಯವರ ಕಾಲದಲ್ಲಿ ಗಂಜಲ ಕೂಡಾಕಿ ಅದುನ್ನ ತಿಪ್ಪೆಗೆ ಹಾಕ್ತಾ ಇದ್ವಿ, ಅದ್ರಿಂದ ತಿಪ್ಪೆ ಗೊಬ್ರ ಬಲೆ ಚೆನ್ನಾಗಿರದು, ಆದ್ರೆ ನಮ್ ಕಾಲ್ದಲ್ಲಿ ಗಂಜಲ ಕೂಡಾಕದನ್ನೆ ಬಿಟ್ ಬಿಟ್ಟಿದ್ವಿ, ಈ ಯೋಜನೆ ಬಂದ್ ಮೇಲೆ ಎಲ್ಲಾ ಕೊಟ್ಟಿಗೆಗಳಿಗೂ ಗಂಜಲದ ಗುಂಡಿ ಬಂದವೆ, ವಾರಕ್ಕೊಂದ್ ಸಲ ಗಂಜಲ ಎತ್ತಿ ಅಡಿಕೆ, ತೆಂಗು, ಬಾಳೆ ಗಿಡದ ಬುಡಕ್ಕೆ ಹಾಕ್ತಾ ಇದ್ದಿವಿ, ತಿರಗ ನಮ್ ತಂದೆ ಕಾಲದ ಪದ್ಧತಿ ವಾಪಸ್ ಬಂದಿದ್ದು ನಮಗೆ ಖುಶಿಯಾಗಿದೆ". ಮಹದೇವಯ್ಯ, ಬಸವರಾಜು, ಸದಾನಂದ, ಗಿರಿಜಮ್ಮ ಮುಂತಾದ ಹಲವರು ಹೇಳಿದ ಮಾತುಗಳಿವು.
ಸಾವಯವ ಕೃಷಿಗೆ ಮೂಲಭೂತ ಅಂಶ ಮಣ್ಣು-ನೀರಿನ ಸಂರಕ್ಷಣೆ. ದಶಕಗಳಿಂದ ರಾಸಾಯನಿಕಗಳನ್ನು ಬಳಸಿ ಬರಡಾಗಿರುವ ಮಣ್ಣನ್ನು ಹದ ಮಾಡಲು ಮೊದಲು ಆಗಬೇಕಾದ ಕೆಲಸ ಇದು. ಇದನ್ನು ಮನಗಂಡು ಕೃಷಿ ಹೊಂಡ ಮತ್ತು ಉದಿ-ಬದು ಹಾಕಲು ಅವಕಾಶ ಕಲ್ಪಿಸಲಾಗಿದೆ. ಸಿ.ಕೆ.ಬಸವರಾಜು, ಶಿವಣ್ಣ, ಮಲ್ಲಿಕಯ್ಯ ಮುಂತಾದ ಹಲವರು ಇದರ ಪ್ರಯೋಜನ ಪಡೆದಿದ್ದಾರೆ. ಅದರಲ್ಲಿ ಮಲ್ಲಿಕಯ್ಯನ ಕೃಷಿಹೊಂಡ ಈ ಸಲ ಅವರ ತೋಟಕ್ಕೆ ಜೀವ ನೀಡಿದೆ. ಅವರ ಪಂಪ್‌ಸೆಟ್ಟಿನ ಮೋಟಾರ್ ಸುಟ್ಟುಹೋಗಿ ಎರಡು ತಿಂಗಳ ಕಾಲ ನೀರಿಗೆ ಪರದಾಟವಾದಾಗ ಕೃಷಿ ಹೊಂಡದಲ್ಲಿದ್ದ ನೀರಿನ ಜೌಗು ತೋಟವನ್ನು ಕಾಪಾಡಿದೆ.

ಯುವಕರಿಗೊಲಿದ ಸಾವಯವ
ಸಾಮಾನ್ಯವಾಗಿ ಯುವಕರು ಸಾವಯವ ಕೃಷಿಯನ್ನು ಅನುಮಾನದಿಂದ ನೋಡುವುದೇ ಹೆಚ್ಚು. ಇಲ್ಲಿ ಪರಿಸ್ತಿತಿ ಇದಕ್ಕೆ ವಿರುದ್ದ, ಯುವಕರೇ ಮುಂದಾಗಿ ಸಾವಯವ ಕೃಷಿಗೆ ಕೈಹಾಕಿದ್ದಾರೆ. ಅದಕ್ಕೆ ಉದಾಹರಣೆ ಪುರುಷೋತ್ತಮ್ ಎಂಬವರು ತಮ್ಮ ೫೦೦ ಗಿಡ ಬಾಳೆಗೆ ಹಸಿರೆಲೆ ಕಾಂಪೋಸ್ಟ್, ಎರೆಹುಳುತೊಟ್ಟಿ ಮುಂತಾದುವುಗಳ ಜೈವಿಕ ಗೊಬ್ಬರ ಬಳಕೆ ಮಾಡುವುದಲ್ಲದೆ ರೋಗ ನಿವಾರಣೆಗಾಗಿ ತಮ್ಮದೇ ಆದ ಪದ್ಧತಿಯೊಂದನ್ನು ಕಂಡುಹಿಡಿದಿದ್ದಾರೆ. ಬಾಳೆಗೆ ಅಲ್ಲಲ್ಲಿ ಬೆಂಕಿರೋಗ ಕಾಣಿಸಿಕೊಂಡಿತು. ರಾಸಾಯನಿಕ ಕೀಟನಾಶಕ ಸಿಂಪಡಿಸಿದರೂ ಸಹ ಯಾವುದೇ ಪರಿಣಾಮ ಕಂಡುಬರಲಿಲ್ಲ. ಆದರೆ ಇವರೇ ತಯಾರಿಸಿದ ದೇಸೀ ಔಷಧದಿಂದ ರೋಗ ಕಡಿಮೆಯಾಗುತ್ತಿದೆ. ಅದರ ತಯಾರಿಕಾ ವಿಧಾನ ಹೀಗಿದೆ.
೫ ಬಿಂದಿಗೆ ಗಂಜಲ, ೪ ಕೆ.ಜಿ. ಕಂಡುಬೆಲ್ಲ, ೧೦ ಲೀಟರ್ ನಷ್ಟು ಬೇವಿನ ರಸ, ೧ ಸೇರು ಸುಣ್ಣದ ನೀರು - ಇವುಗಳನ್ನೆಲ್ಲಾ ಒಂದು ದೊಡ್ಡ ಗುಡಾಣಕ್ಕೆ ಮಿಶ್ರ ಮಾಡಿ ಹಾಕಿ ೧೦ ದಿವಸ ಹಾಗೇ ಕೊಳೆಯಲು ಬಿಡಬೇಕು. ನಂತರ ಆ ಕಷಾಯವನ್ನು ಕುಂಚುಮಟ್ಟೆಯಿಂದ ಬಾಳೆಗೆ ಸಿಂಪಡಿಸಿದ್ದಾರೆ. ಇದರಿಂದ ಬಾಳೆಯ ಬೆಂಕಿ ರೋಗ ಹತೋಟಿಗೆ ಬಂದಿದೆ ಎನ್ನುತ್ತಾರೆ ಪುರುಷೋತ್ತಮ್. ಇದರ ಸಿಂಪರಣೆಯ ನಂತರ ಜೇನುಹುಳುಗಳು ಬರಲು ಆರಂಭಿಸಿರುವುದನ್ನು ಗಮನಿಸಿದ್ದಾರೆ.
ಸಿ.ಕೆ.ಬಸವರಾಜು ಅವರು ೮೦ ರ ದಶಕದಲ್ಲಿಯೇ ಅಡಿಕೆ ಮತ್ತು ತೆಂಗಿನ ಗಿಡಗಳಿಗೂ ರಾಸಾಯನಿಕ ಗೊಬ್ಬರ ಬಳಸಲು ಶುರು ಮಾಡುತ್ತಾರೆ. ಆರಂಭದಲ್ಲಿ ಉತ್ತಮ ಫಸಲು ಸಿಕ್ಕರೂ ೮-೧೦ ವರ್ಷಗಳ ನಂತರ ಇಳುವರಿ ಕಡಿಮೆಯಾಯಿತು. ವಿಪರೀತ ರಾಸಾಯನಿಕಗಳ ಬಳಕೆಯಿಂದಾಗಿ ತೆಂಗಿನ ಮರಗಳಲ್ಲಿ ಕಾಂಡ ಸೋರುವಿಕೆ ಮತ್ತು ಅಡಿಕೆ ಮರಗಳಲ್ಲಿ ಬೇರುಕೊಳೆಯುವಿಕೆ ಪ್ರಾರಂಭವಾಯಿತು. ಹಲವಾರು ವಿಧಾನ ಅನುಸರಿಸಿದರೂ ಸಹ ಪ್ರಯೋಜನ ಕಾಣಲಿಲ್ಲ. ತರಬೇತಿಯಲ್ಲಿ ಭಾಗವಹಿಸಿದ ನಂತರ ತೆಂಗು ಮತ್ತು ಅಡಿಕೆಗೆ ಜೀವಾಮೃತ ಕೊಡಲು ಆರಂಭಿಸಿದರು. ಜೊತೆಗೆ ಟ್ರೈಕೊಡರ್ಮ ಸಹ ಬಳಸಲು ಆರಂಭಿಸಿದರು. ಆಶ್ಚರ್ಯಂಬಂತೆ ಇದರಿಂದ ರೋಗ ಹತೋಟಿಗೆ ಬರುತ್ತಿದೆ. ಇವರ ಮಾವಿನ ತೋಟ ಸಂಪೂರ್ಣ ಸಾವಯವ. ಹಣ್ಣುಗಳ ಗಾತ್ರ, ರುಚಿ ಎರಡೂ ಉತ್ಕೃಷ್ಟ.
ಸಾವಯದಲ್ಲಿ ಬೆಳೆದ ವಸ್ತುಗಳಿಗೆ ತಾವೇ ಸ್ವತಃ ಮಾರುಕಟ್ಟೆ ವ್ಯವಸ್ತೆ ಮಾಡಿಕೊಳ್ಳಬೇಕು, ಮೌಲ್ಯವರ್ಧನೆ ಮಾಡಬೇಕು, ಇನ್ನೆರಡು ವರ್ಷದಲ್ಲಿ ಶೇಕಡ ೧೦೦ ರಷ್ಟು ಸಾವಯವ ಗ್ರಾಮವನ್ನಾಗಿ ಪರಿವರ್ತಿಸಬೇಕು, ಸಾವಯವ ಸರ್ಟಿಪಿಕೇಶನ್ ಪಡೆದುಕೊಳ್ಳಬೇಕು ಮುಂತಾದ ಅನೇಕ ಕನಸುಗಳನ್ನು ಸಮಿತಿಯು ಇಟ್ಟುಕೊಂಡಿದೆ. ಇಲ್ಲಿ ಜನರ ಯುನಿಟಿ ಚೆನ್ನಾಗಿದೆ, ಅಂದುಕೊಂಡಿದ್ದನ್ನು ಸಾಧಿಸುತ್ತಾರೆ, ಪ್ರಸ್ತುತ ರಾಜ್ಯದಲ್ಲಿ ರಾಸಾಯನಿಕ ಗೊಬ್ಬರದ ಗಲಾಟೆಯನ್ನು ನೋಡುತ್ತಿದ್ದರೆ ಜನರು ಬೇಗ ಸಾವಯವ ಕೃಷಿ ಅಳವಡಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. "ಸಾವಯವ ಬೇಸಾಯವೂ ಸಹ ಲಾಭದಾಯಕ ಎಂಬುದು ಒಂದು ಸಾರಿ ರೈತರಿಗೆ ಮನವರಿಕೆಯಾದರೆ ಯೋಜನೆ ಮುಕ್ಕಾಲು ಪಾಲು ಯಶಸ್ವಿಯಾದಂತೆ, ಇದನ್ನು ಗೊರಘಟ್ಟದ ರೈತರು ಬೇಗ ಅರ್ಥಮಾಡಿಕೊಂಡಿದ್ದಾರೆ" ಎಂಬುದು ಸಾವಯವ ಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಆರ್ಡರ್ ಸಂಸ್ಥೆಯ ಯೋಜನಾ ನಿರ್ದೇಶಕ ಜಿ.ವಿ.ರಘುರವರ ಅಭಿಪ್ರಾಯ.