ಭಾನುವಾರ, ಸೆಪ್ಟೆಂಬರ್ 5, 2010

ಅರಳೀಮರ (ಅಶ್ವತ್ಥ, ಪಿಪ್ಪಲ..)

ನಮ್ಮ ದೇಶದ ಎಲ್ಲೆಡೆ ಬೆಳೆಯುವ ಮರ. ಇದರ ತುಂಬಾ ಎಲೆಗಳಿರುತ್ತವೆ. ಸ್ವಲ್ಪ ಗಾಳಿಗೂ ಅಲ್ಲಾಡುತ್ತಾ ಪರಪರ ಶಬ್ದ ಮಾಡುತ್ತಿರುವುದು. ಅದಕ್ಕೇ ಈ ಮರಕ್ಕೆ 'ಚಲಪತ್ರ' ಎಂಬ ಹೆಸರೂ ಇದೆ.
ಆಲದಂತೆ ಈ ಮರಕ್ಕೂ ಬೀಳಲುಗಳಿದ್ದರೂ ಗಾತ್ರದಲ್ಲಿ
ಸಣ್ಣ ಮತ್ತು ತೆಳುವಾಗಿರುವುದು.(पीपल कि दाडी :) )
ಈ ವೃಕ್ಷದ ಅಡಿಯಲ್ಲೇ ಕುಳಿತು ಅಖಂಡ ೪೯ ದಿನ ಧ್ಯಾನಿಸಿ,
ಜ್ಞಾನೋದಯವಾದ ಬುದ್ಧನಿಂದಾಗಿ ಇದಕ್ಕೆ 'ಬೋಧಿ ವೃಕ್ಷ' ಎನ್ನುವರು.
ಆನೆಗಳಿಗೆ ಇದರ ಎಲೆ ಪ್ರಿಯ ಖಾದ್ಯ ದ್ರವ್ಯ. ೪-೬ ದಿನ ಆನೆಗಳಿಗೆ ಇದರ ಎಲೆ ತಿನ್ನಲು ಸಿಗದಿದ್ದರೆ ಉನ್ಮತ್ತಗೊಳ್ಳುವುದಂತೆ. ಅದಕ್ಕೇ ಅಶ್ವತ್ಥಕ್ಕೆ

'ಗಜಾಶನ, ಗಜಭಕ್ಷ್ಯ' ಎಂಬ ಹೆಸರು ಬಂತು.
ಹಿಂದಿ ಹೆಸರು- ಪೀಪಲ್, ಪೀಪರ್
ಇಂಗ್ಲೀಷ್ನಲ್ಲಿ- peepul tree.
ಬಾಟನಿಕಲ್ ಹೆಸರು- Ficus religiosa. (Ficus rumphii ಇತ್ಯಾದಿ ಹಲವು ಪ್ರಭೇದಗಳಿವೆ)
ಅರಳಿಮರದಲ್ಲಿ ಭೂತಪ್ರೇತಗಳು ವಾಸಿಸುವುದಿಲ್ಲ ಎಂಬ ನಂಬಿಕೆ. ದೇವಸ್ಥಾನಗಳ ಸಮೀಪ ಅರಳೀಮರ,ಅಥವಾ ಅರಳೀಮರದ ಸಮೀಪ ದೇವಸ್ಥಾನಗಳು ಏಳುವುದು ಸಾಮಾನ್ಯ.
ಈ ಮರದ ಅಡಿಯಲ್ಲಿ ನಾಗನ ಕಲ್ಲುಗಳನಿಟ್ಟು ಪೂಜಿಸುವರು. ಮಕ್ಕಳಾಗದ ದಂಪತಿಗಳು ಅಶ್ವತ್ಥಕ್ಕೆ ಸುತ್ತು ಹಾಕಿ ನಾಗನ ಕಲ್ಲಿಗೆ ಪೂಜೆ ಸಲ್ಲಿಸಿದರೆ ಮಕ್ಕಳಾಗುವುದಂತೆ.
ಸಿನಿಮಾಗಳಲ್ಲಿ, ಅರಳೀ ಮರದ ಅಡಿಯ ಕಟ್ಟೆಯಲ್ಲಿ, ಹಳ್ಳಿಯ ಸಮಸ್ತ ಜನರು ಸೇರಿ, ಚರ್ಚೆ,ಜಗಳ,ನ್ಯಾಯತೀರ್ಮಾನ ಮಾಡುವುದನ್ನು ನೋಡಿಯೇ ಇರುತ್ತೀರಿ.

ಕಾಮೆಂಟ್‌ಗಳಿಲ್ಲ: