ಸೋಮವಾರ, ಸೆಪ್ಟೆಂಬರ್ 6, 2010

ಆಲದ ಮರ- ಭಾರತದ ‘ರಾಷ್ಟ್ರವೃಕ್ಷ’.


ಆಲದ ಮರ- ಭಾರತದ 'ರಾಷ್ಟ್ರವೃಕ್ಷ'.

ಹಿಂದಿಯಲ್ಲಿ 'ಬರಗದ್' ಎನ್ನುವರು.

ಇದರ ನೆರಳಲ್ಲಿ ಬನಿಯಾ(ಹಿಂದೂ ವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು banyan tree ಎಂದು ವಿದೇಶೀಯರು ಕರೆದರು.

ಸಂಸ್ಕೃತದಲ್ಲಿ ಇದನ್ನು 'ನ್ಯಗ್ರೋಧ' ಎಂದು ಕರೆಯುವರು. ಬಿಸಿಲು, ಮಳೆ ಕೆಳಗೆ

ಬೀಳುವುದರಿಂದ ತಡೆಯುವುದು ಎಂದು ಇದರ ಅರ್ಥ. ( ನ್ಯಕ್ ಅಧೋದೇಶೇ

ಸೂರ್ಯತಾಪ ವರ್ಷಾದಿ ರೋಧನಾತ್..)
ಆಲದ ಮರಕ್ಕೆ ಕೆಳಗೆ ಸೂಚಿಸಿದ ಗುಣಗಳಿರುವುದರಿಂದ ಅದು ಪುರುಷಪ್ರಾಯವಾದುದೆಂದು, ತ್ರಿಮೂರ್ತಿಸ್ವರೂಪಿಯೆಂದು ಪರಿಗಣಿಸಲ್ಪಟ್ಟಿದೆ :

೧. ಇದರ ಬೇರುಗಳಿಂದ ಕಷಾಯ ಮಾಡಿ ಕುಡಿದರೆ ಗರ್ಭ ನಿಲ್ಲುತ್ತದೆ. ಆದ್ದರಿಂದ - ಬೇರುಗಳು ಬ್ರಹ್ಮ / ಸೃಷ್ಟಿಶಕ್ತಿಯ ಪ್ರತೀಕ

೨. ಇದರ ಕಾಂಡ, ಕೊಂಬೆಗಳು ಔಷದೀಯ ಗುಣಗಳು ಹೊಂದಿದೆ. ಇದರಿಂದ ಮಾಡುವ ಹೋಮದ ಧೂಪ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ -ಕೊಂಬೆ, ಕಾಂಡ ವಿಷ್ಣು / ಸ್ಥಿತಿಶಕ್ತಿಯ ಪ್ರತೀಕ

೩. ಎಲೆ, ಚಿಗುರಿನ ಕಷಾಯ ಗರ್ಭ ಪಾತಕ್ಕೆ ಉಪಯೋಗಿಸಲಾಗುತ್ತದೆ. ಆದ್ದರಿಂದ - ಎಲೆಗಳು ರುದ್ರ / ಲಯಶಕ್ತಿಯ ಪ್ರತೀಕ
ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ "ನಾನು ವೃಕ್ಷಗಳಲ್ಲಿ ಅಶ್ವತ್ಥ, ಋಷಿಗಳಲ್ಲಿ ಕಶ್ಯಪ, ಮುಂತಾಗಿ ತನ್ನ ವಿಶ್ವರೂಪದರ್ಶನದಲ್ಲಿ ಹೇಳುತ್ತಾನೆ"
ಹೀಗೆ ಅರಳೀ ಮರ ಪುರುಷ ಸಂಕೇತವಾಗಿದೆ. ಅದೇ ರೀತಿ ಆಲದ ಮರ ಸ್ತ್ರೀ ಸಂಕೇತವಾಗಿದೆ (ಪ್ರಾಯಶಃ ಅದರ ಅಗಾಧ ಬೇರುಗಳ ಕಾರಣದಿಂದ). ಈ ಕಾರಣಗಳಿಂದ ಅರಳೀ ಮರ - ಆಲದ ಮರದ ವಿವಾಹದ ಆಚಾರವು ನಡೆಯುತ್ತವೆ

ಕಾಮೆಂಟ್‌ಗಳಿಲ್ಲ: